Showing posts with label Kumara Parvatha. Show all posts
Showing posts with label Kumara Parvatha. Show all posts

Thursday, January 31, 2019

ನವ ಮಾಸ.. ನವ ವರ್ಷ.. ನವಮಿ ಕುಮಾರಪರ್ವತ ಶಿರಸಾ ನಮಾಮಿ!!!

ರಾಜನೋ ರಾಣಿನೊ.. ಹೆಡ್ ಆರ್ ಟೈಲ್.. ಈ ರೀತಿಯ ಗೊಂದಲಗಳಿದ್ದಾಗ.. ತಲೆ ಕೆರೆದುಕೊಂಡೆ.. ಹುಲುಸಾಗಿ ಬೆಳೆದಿದ್ದ ತಲೆಗೂದಲ ಮಧ್ಯೆ ಒಂದು ಉಪಾಯ ಹೊಳೆಯಿತು.. 

ಪ್ರತಿ ಬಾರಿಯೂ ವಿಭಿನ್ನ ಅನುಭವ ಕೊಡುವ ಚಾರಣವೇ.. ಅಥವಾ ನೆನಪುಗಳ ಮಾಲೆ ಹೊತ್ತ ಪ್ರವಾಸವೇ.. ಬೇರೆ ಮಾತೆ ಇಲ್ಲ.. ಚರಣದಿಂದ ಚಾರಣಕ್ಕೆ ಎನ್ನುವ ಮಾತೆ ನಿಂತಿತು...

ಶಂಕರ್ ಗುರು ಚಿತ್ರದಲ್ಲಿ ಅಣ್ಣಾವ್ರಿಗೆ ಜೀವನದ ಒಂದು ಘಟನೆ ಬಹಳ ದುಃಖ ಕೊಡುತ್ತಿರುತ್ತದೆ.. ಅದಕ್ಕೆ ಸೇವಕನಿಗೆ ದುಡ್ಡು ಕೊಟ್ಟು ಚಾವಟಿಯಲ್ಲಿ ಹೊಡೆಸಿಕೊಂಡು ದೇಹ ದಂಡಿಸುತ್ತಾ ಇರುತ್ತಾರೆ.. ಆಗ ಹೇಳುವ ಮಾತು "ಆತ್ಮ ಶುದ್ಧಿಗಾಗಿ ಈ ದೇಹಕ್ಕೆ ಪ್ರಾಯಶ್ಚಿತ್ತ ಅನಿವಾರ್ಯ.." ಸೂಪರ್ ಮಾತುಗಳು ..  ಹೌದು.. ಗೊಂದಲದ ಬೀಡಾದಾಗ ಪ್ರಕೃತಿಯೇ ಮದ್ದು ಎನ್ನುತ್ತದೆ ನನ್ನ ಸರಳ ಜೀವನದ ಸೂತ್ರ..

ಶಿಖರದ ತುತ್ತ ತುದಿ.. ಅದುವೇ ಚಾರಣದ ಗಮ್ಮತ್ತು 
ಕುಮಾರಪರ್ವತ ಮತ್ತು ನನ್ನ  ನಡುವೆ ನೆಡೆದ ಮಾತುಕತೆಯೇ ಈ ಬರಹದ ತಿರುಳು.. 

"ಏನ್ಲಾ ಶ್ರೀ.. ಒಂದು ವರ್ಷದಿಂದ ಈ ಕಡೆ ತಲೆ ಹಾಕಿಯೇ ಇಲ್ಲ ಏನ್ ಕತೆ"

"ಇಲ್ಲ ಕಣೋ ಕೆಪಿ.. ಬರಬೇಕು ಬರಬೇಕು ಅಂತಲೇ ಇದ್ದೆ.. ಕೆಲಸ ಕೆಲಸ.. ಅದು ಇದು ಅಂತ ಮುಳುಗಿ  ಹೋಗಿದ್ದೆ.. ೨೦೧೮ ಪೂರಾ ಹಾಗೆ ಕಳೆಯಿತು.. ಹಗ್ಗದ ಮೇಲಿನ ಇರುವೆ ನೆಡಿಗೆ ನನ್ನದು.. ಹಾಗಾಗಿ ಬರಲಿಕ್ಕೆ ಆಗಲಿಲ್ಲ ಕಣೋ.. "

ಶ್ರಮ ಇರುವೆಯ ಹಾಗೆ ಇರಬೇಕು.. ಸದಾ ಪರಿಶ್ರಮ ಇರಲೇಬೇಕು.. !!!
                                                                                                                      ******

"ಮೊದಲಾದರೆ ಬರ್ತಾ ಇದ್ದೆ. .ಈಗ ನಿನಗೆ ಕೊಬ್ಬು ಹೆಚ್ಚಾಗಿದೆ.. "

"ಹೌದು.. ಎಲ್ಲರೂ ಅದೇ ಹೇಳ್ತಾ ಇದ್ದಾರೆ.. ಪ್ಯಾಂಟ್ ಸೈಜ್ ದೊಡ್ಡದಾಗಿದೆ.. ಕೊಬ್ಬು ಇಳಿಸಬೇಕು.." ಜೋರಾದ ನಗು

"ಸರಿ.. ಈ ಚಾರಣ ನಿನಗೆ ವಿಶಿಷ್ಟ.. ಸರಿ ನೀ ಹೇಳು.. ಆಮೇಲೆ ಕೂತು ಮಾತಾಡೋಣ"


"ಸರಿ ಗುರು"
                                                      ****************



ಒಂದು ಸಣ್ಣ ಕಿಡಿ ಸಾಕು.. ದೀಪ ಬೆಳಗೋಕೆ .. ಹಾಗೆ ನನ್ನ ನೆಚ್ಚಿನ ಕುಮಾರಪರ್ವತದ ಚಾರಣಕ್ಕೆ ಹೊರಡಬೇಕು ಎಂದಾಗ.. ನನ್ನ ಶಾಲಾ ದಿನಗಳಿಂದಲೂ ಜೊತೆಯಾಗಿರುವ ಶಶಿ ಮತ್ತು ವೆಂಕಿ.. ಮತ್ತು ವೆಂಕಿಯ "ಹೆಂಡತಿ" ಸೌಮ್ಯ ... ನನ್ನ ಮುದ್ದು ತಂಗಿ ರಶ್ಮಿ ಅಣ್ಣ ನಾನು ಅಂದಳು   .ಇನ್ನೊಬ್ಬ ತಮ್ಮ ಚಿದಾನಂದ ಶ್ರೀಕಾಂತಣ್ಣ ನಾನೂ.. ಎಂದರು.. .. ಅಕ್ಕನ ಮಗ ಆದಿತ್ಯ ಜೊತೆಯಾದ...ಅಲೆಮಾರಿಗಳು ತಂಡದ ಗಿರಿ, ಅವರ ಗೆಳೆಯ ವಿನೋದ್..  . ಪುಟ್ಟ ಮಗುವಾಗಿದ್ದಾಗಿಂದಲೂ ನೋಡಿರುವ ಪುಟ್ಟ ಪುಟ್ಟ ಮುದ್ದು ತಂಗಿ ವಿಭಾ..ಇವರೆಲ್ಲ ಜೊತೆಯಾದರು.. ಕಡೆ ಘಳಿಗೆಯಲ್ಲಿ ಜೊತೆಯಾದ ನನ್ನ ಬ್ಲಾಗ್ ಮತ್ತು ಚಾರಣದ ಗುರು ರೋಹಿತ್..

ಹನ್ನೊಂದು ಮಂದಿ ಸಾಕೆ ಅಂದಾಗ.. ಮಂಜಣ್ಣ ನಾನೂ ಇದ್ದೀನಿ ಅಂತ ಸೇರಿಕೊಂಡಿದ್ದು ಗೆಳೆಯ ಕಿರಣ್ ವಟಿ ಮತ್ತು ಚಿಕ್ಕಪ್ಪ ಚಿಕ್ಕಪ್ಪ ಎನ್ನುತ್ತಾ ಸುತ್ತಲೇ ಸುತ್ತುತ್ತಿದ್ದ ಮುದ್ದು ಮಗು "ಸಿರಿ".. ಹದಿಮೂರು ವಾಹ್.. ಸೂಪರ್ ತಂಡ ಎನಿಸಿತು..

ಸುವರ್ಣ ಸಾರಿಗೆ ಪಯಣ ಅಯ್ಯೋ ಎನಿಸಬಹುದು .. ಆದರೆ ಆ ಗೌಜು, ಗದ್ದಲಗಳ ನಡುವೆ.. ಎಲ್ಲ ಕಡೆಯಿಂದಲೂ ಸದ್ದು ಮಾಡುವ ಬಸ್, ಗಾಳಿ ಬರ್ ಎನ್ನುತ್ತಾ ನುಗ್ಗುವ ಆ ಡಬ್ಬದ ಪಯಣ ಹೇಳಿದರೆ ಸಾಲದು ಅನುಭವಿಸಬೇಕು.. 

ಮೈಸೂರು ನಿಯೋ ಹೋಟೆಲಿನಲ್ಲಿ ಹೊಟ್ಟೆಗೆ ಸೇರುವಷ್ಟು ತಿಂಡಿ ತಿಂದು.. ಹೆಜ್ಜೆ ಹಾಕಿದಾಗ ಕುಮಾರಪರ್ವತ.. ನನ್ನ ನೆಚ್ಚಿನ ಕುಮಾರಪರ್ವತ ನನ್ನ ಹತ್ತಿರಕ್ಕೆ ಬರುತ್ತಿತ್ತು.. 

ತುಂಬು ಸಂತಸದಿಂದ ಹೊರಟ ತಂಡ. .
ಚಿತ್ರಕೃಪೆ - ಸೌಮ್ಯ ವೆಂಕಿ..
ಚಿತ್ರಿಸಿದ್ದು ರೋಹಿತ್ 

ಚಾರಣದ ಆರಂಭದ ಬಾಗಿಲಿನಲ್ಲಿ ಒಂದು ಸೆಲ್ಫಿ ಹೊಡೆದು.. ಹೊರಟೆವು.. ಗಿರಿ, ರೋಹಿತ್ ಮತ್ತು ವಿನೋದ್ ಹೆಜ್ಜೆ ಹಾಕುತ್ತಾ ಎಲ್ಲರಿಗಿಂತ ಮುಂದಕ್ಕೆ ಹೋದರು.. ಅವರ ಹಿಂದೆ ವೆಂಕಿ, ಸೌಮ್ಯ, ಶಶಿ, ವಿಭಾ, ಆದಿತ್ಯ, ಚಿದು ಹಿಂಬಾಲಿಸಿದರು.. ಕುಮಾರಪರ್ವತ ನನಗೆ ಹೊಸದಲ್ಲ.. ಹಾಗಾಗಿ ಧಾರಾಳಾವಾಗಿ ಮಾತಾಡುತ್ತ ನಾನು, ರಶ್ಮಿ, ಕಿರಣ್ ಮತ್ತು ಸಿರಿ ಹೆಜ್ಜೆ ಹಾಕಿದೆವು.. ಸಮಗ್ರ ಮಾತುಗಳು ನೆಡೆಯುತ್ತಲೇ ಇತ್ತು.. ಒಂದಾದ ಮೇಲೆ ಒಂದು ವಿಷಯ.. ಅಕ್ಷಯಪಾತ್ರೆಯಾಗಿತ್ತು. 

ಮಿಕ್ಕವರು ಮುಂದಕ್ಕೆ ಹೆಜ್ಜೆ ಹಾಕಿದ್ದರಿಂದ.. ನಮಗೆ ಅಂಕೆ ಶಂಕೆ ಯಾವುದೂ ಇರಲಿಲ್ಲ.. ಹಾಯಾಗಿ ಭೀಮನಕಲ್ಲಿನ ಹತ್ತಿರ ಸಿಗುವ ಝರಿಯಲ್ಲಿ ಒಂದಷ್ಟು ಹೊತ್ತು ಕಾಲ ಕಳೆದೆವು.. ಫೋಟೋಗಳು .. ಮಾತುಗಳು ಒಂದರ್ಧ ಘಂಟೆಯನ್ನು ನುಂಗಿ ನೀರು ಕುಡಿದವು. 

ಭಟ್ಟರ ಮನೆಗೆ ಬರುವಷ್ಟರಲ್ಲಿ "ಮರಿ ಅವರೆಲ್ಲ ಊಟ ಮಾಡ್ತಾ ಇದ್ದಾರೆ.. ಬೇಗ ಊಟ ಮಾಡಿ ಫಾರೆಸ್ಟ್ ಆಫೀಸ್ ಹತ್ರ ಬಾ.. ಟಿಕೆಟ್ ತಗೊಂಡಿರ್ತೀನಿ" ಅಂದ ರೋಹಿತ್.. ಸರ ಸರ ಊಟ ಮಾಡಿ ಹೊರಟೆವು.. 

"ಎಲ್ರಿ ನಿಮ್ಮ ಬ್ಯಾಗ್ ತೋರಿಸಿ.. ಊಟ ತಿಂಡಿ ನೀರು ಬಿಟ್ಟು ಬೇರೆ ಏನೂ ತೆಗೆದುಕೊಂಡು ಹೋಗುವ ಹಾಗಿಲ್ಲ.. " ಎನ್ನುತ್ತಾ ಅರಣ್ಯ ಸಿಬ್ಬಂಧಿಗಳು ತಪಾಸಣೆ ನೆಡೆಸಿ.. ಹೆಸರುಗಳನ್ನೆಲ್ಲ ಬರೆದುಕೊಂಡು.. ತಲೆಗೆ ೩೫೦ ರೂಪಾಯಿಗಳನ್ನು ಹಾಗೂ ಸೆಕ್ಯೂರಿಟಿ ಡೆಪಾಸಿಟ್ ಅಂತ ೧೦೦೦ ರೂಪಾಯಿಗಳನ್ನು ತೆಗೆದುಕೊಂಡರು.. ಲೆಕ್ಕ ಹಾಕಿ ನೋಡಿದ್ದ ಪ್ಲಾಸ್ಟಿಕ್ ಬಾಟಲುಗಳನ್ನು ಮತ್ತು ಸಂಜೆ ಆರು ಘಂಟೆಯೊಳಗೆ ಬರದಿದ್ದರೆ ೧೦೦೦ ರೂಪಾಯಿಗಳಿಗೆ ಮೇಲುಕೋಟೆ ನಾಮವೇ ಗಟ್ಟಿ ಎಂದು ಹೇಳಿದ್ದರು.. 
ಅಲೆಮಾರಿಗಳ ಚಾರಣ 

ರೋಹಿತ್, ವಿನೋದ್ ಮತ್ತು ಗಿರಿ ದೌಡಾಯಿಸಿದರು.. ಅವರ ಹಿಂದೆ ಮಿಕ್ಕವರು. .ನಾನು ಮತ್ತು ರಶ್ಮಿ ಮೆಲ್ಲನೆ ಹೆಜ್ಜೆ ಹಾಕುತ್ತಾ.. ಒಂದು ಹಂತಕ್ಕೆ ಬಂದು.. ಮುಂದೆ ಹೋಗಲು ಇಷ್ಟವಾಗದೇ (ಅಥವಾ ತ್ರಾಣವಿಲ್ಲದೆ) ಅಲ್ಲಿಯೇ ತಣ್ಣಗೆ ಕೂತು ಮಾತಾಡುತ್ತಾ ಕುಳಿತೆವು.. ನನ್ನ ಇಷ್ಟವಾದ ಜಾಗವದು.. ಬಿಸಿಲು ಕಾಯುವಷ್ಟು ಇರಲಿಲ್ಲವಾದರೂ ಸುಡುತ್ತಿತ್ತು.. ಹಾಗೆ ಹುಲ್ಲುಗಾವಲಿನಲ್ಲಿ ತಣ್ಣಗೆ ಮಲಗಿ ಒಂದು ನಿದ್ದೆ ತೆಗೆದೆ.. ರಶ್ಮಿ ಕೂಡ ಸ್ವಲ್ಪ ಹೊತ್ತು ನಿದ್ದೆ ಮಾಡಿ.. ತನ್ನ ಬಾಯಿಗೆ ವ್ಯಾಯಾಮ ಮಾಡಿಸಲು ಚಾರಣಕ್ಕೆ ಬಂದಿದ್ದ ಒಬ್ಬರ ಹತ್ತಿರ ಮಾತಾಡುತ್ತ ಕುಳಿತಿದ್ದಳು.. 

ನನಗೆ ಎಚ್ಚರವಾದ ಮೇಲೆ ತಂದಿದ್ದ ಚಪಾತಿಯನ್ನು ಇಬ್ಬರೂ ಹೊಟ್ಟೆ ತುಂಬುವಷ್ಟು ತಿಂದೆವು..   

ಅಷ್ಟರಲ್ಲಿ ನಮ್ಮ ಒಂದು ತಂಡ ಬಂದಿತು.. ಶೇಷಪರ್ವತದ ತಪ್ಪಲಿಗೆ ಹೋಗಿ.. ವಾಪಾಸ್ ಬಂದಿದ್ದರು.. ಮಾತುಕತೆ.. ಚಪಾತಿ.. ತಂದಿದ್ದ ತಿಂಡಿ.. ಮತ್ತಷ್ಟು ಫೋಟೋಗಳು.. ನಂತರ ಮೆಲ್ಲಗೆ ನೆಡೆಯುತ್ತಾ ಭಟ್ಟರ ಮನೆ ಕಡೆ ಹೆಜ್ಜೆ ಇಟ್ಟೆವು.. 
ಒಂದು ತಂಡ.. ಸಂತಸದಲ್ಲಿ 

ವೀಕ್ಷಣಾ ತಾಣದ ಬಳಿ ಮತ್ತೆ ಒಂದಷ್ಟು ಮಾತುಕತೆ.. ವಿನೋದ್, ರೋಹಿತ್ ಮತ್ತು ಗಿರಿ ಸುಳಿವಿರಲಿಲ್ಲ.. ಕತ್ತಲಾಗುತ್ತೆ ಅಂತ.. ನಾವೆಲ್ಲರೂ ಅರಣ್ಯ ಇಲಾಖೆ ಹತ್ತಿರ ಬಂದೆವು.. ಅಲ್ಲಿಯೂ ಕಾದರೂ ಉಪಯೋಗವಿಲ್ಲ.. ಅಲ್ಲಿದ್ದ ಸಿಬ್ಬಂದಿಗಳು ನಿಮ್ಮ ಬ್ಯಾಗ್ ತಗೊಂಡು ಹೊರಡಿ ಬಂದವರನ್ನು ನಾವು ಕಳಿಸುತ್ತೇವೆ.. ಎಂದು ನಮ್ಮನ್ನು ಸಾಗು ಹಾಕಿದರು.. 

ಕತ್ತಲಾಗಿತ್ತು .. ಭಟ್ಟರ ಮನೆ ಅಕ್ಷರಶಃ ಸಂತೆಯಾಗಿತ್ತು.. ಏನಿಲ್ಲವೆಂದರೂ ೩೦೦ ಮಂದಿಗೂ ಹೆಚ್ಚು.. ಆದರೆ ಅಲ್ಲಿ ಕಂಡ ಶಿಸ್ತು ಇಷ್ಟವಾಯಿತು.. ತಟ್ಟೆ ತೊಳೆದುಕೊಂಡು ಬರೋಕೆ ಸರತಿ ಸಾಲು,ಅನ್ನ ಸಾರು ಹಾಕಿಕೊಳ್ಳೋಕೆ ಸರತಿ ಸಾಲು.. ಮತ್ತೆ ತಟ್ಟೆ ತೊಳೆಯೋಕೆ ಸಾಲು.. ಇಷ್ಟವಾಯಿತು.. ಸರ್ ನಿಮ್ಮ ಊಟ ಆಯ್ತಾ.. ಆಗಿದ್ದರೆ ತಟ್ಟೆ ಕೊಡಿ ಸರ್.. ಅಂತ ಕೇಳುವವರು ಒಬ್ಬರಾದರೆ ..ಊಟ ಮುಗಿಯುವ  ಲಕ್ಷಣ ಕಂಡ ಕೂಡಲೇ.. ನಮ್ಮ ಹಿಂದೆ ಮುಂದೆ ಸುತ್ತಿ.. ತಟ್ಟೆ ತೊಳೆದಮೇಲೆ ನಮ್ಮ ಕೈಯಿಂದ ಅದನ್ನು ತೆಗೆದುಕೊಂಡು ಹೋಗುವವರು ಒಬ್ಬರಾದರೆ.. ಕೊಡಿ ಸರ್ ನಾನೇ ತೊಳೆದುಕೊಳ್ಳುತ್ತೇನೆ ಎನ್ನುವವರು ಇದ್ದರು.. ಇಬ್ಬರೂ ಮೂವರು ಒಂದೇ ತಟ್ಟೆಯಲ್ಲಿಯೇ ಊಟ ಮಾಡುತ್ತಿದ್ದದ್ದು ಕಂಡು ಬಂದಿತ್ತು.. ಹೊಟ್ಟೆ ಹಸಿವು ಮನುಜನನ್ನ ರಾಕ್ಷಸನ್ನಾಗಿ ಮಾಡುವುದು ನೋಡಿದ್ದೇ.. ಆದರೆ ಇಲ್ಲಿ ಮಾನವೀಯತೆಯೂ ಕಾಣುತ್ತಿತ್ತು... 

ಇಷ್ಟೆಲ್ಲಾ ಆಗುವ ಹೊತ್ತಿಗೆ ರೋಹಿತ್, ಗಿರಿ ಮತ್ತು ವಿನೋದ್ ಬಂದರು.. ಕುಮಾರಪರ್ವತದ ತುತ್ತ ತುದಿಯನ್ನು ತಲುಪಿದ ಖುಷಿ ಮತ್ತು ತೃಪ್ತಿ ಅವರ ಮೊಗದಲ್ಲಿ ಕಾಣುತ್ತಿತ್ತು.. !

ಶಿಖರವೇರಿದ ಸಂತಸದಲ್ಲಿ ತ್ರಿಮೂರ್ತಿಗಳು 



ಮರಿ ಗಿರಿ ವಿನೋದ 
ವಿಭಾ,ರಶ್ಮಿ, ಸೌಮ್ಯ ಮತ್ತು ಸೌಮ್ಯ ಅವರ ಪತಿರಾಯ ವೆಂಕಿಯನ್ನು ಒಂದು ಟೆಂಟ್ ಒಳಗೆ ಮಲಗೋಕೆ ಹೇಳಿದೆವು.. ಆದಿತ್ಯ, ರೋಹಿತ್ ಮತ್ತು ಗಿರಿ ಇನ್ನೊಂದು ಟೆಂಟ್.. ವಿನೋದ್, ನಾನು, ಚಿದು ಮತ್ತು ಶಶಿ ಮಲಗುವಚೀಲದೊಳಗೆ ಜಾರಿಕೊಂಡು ಮುಂದಿನ ದಿನಕ್ಕೆ ಅಣಿಯಾಗಲು ಮಲಗಿದೆವು.. 
ಉಳಿದಿದ್ದು ಇಲ್ಲಿ ಶ್ರೀ 


ಬೆಳಗಾದಾಗ 


ಶ್ರೀ ಇಲ್ಲಿ ಕೂಕ್ ಎಂದ ಮರಿ 
ಬೆಳಿಗ್ಗೆ ತುಸು ಬೇಗ ಎದ್ದು.. ನಾನು ಒಂದು ಪುಟ್ಟ ವಾಕಿಂಗ್ ಹೋಗಿದ್ದೆ.. ಒಂದಷ್ಟು ಫೋಟೋ ಸಿಕ್ಕಿದವು.. ಒಬ್ಬೊಬ್ಬರೇ ನಿತ್ಯ ಕರ್ಮಗಳನ್ನು ಮುಗಿಸಿ.. ತಿಂಡಿ ತಿಂದು.. ಟೆಂಟ್ ಮಡಿಸಿ.. ಭಟ್ಟರಿಗೆ ನಮಸ್ಕಾರ ತಿಳಿಸಿ ಕುಕ್ಕೆಗೆ ಇಳಿಯೋಕೆ ಶುರುಮಾಡಿದೆವು.. 
ಚಾರಣದ ತಂಡ ಅನ್ನದಾತರ ಜೊತೆಯಲ್ಲಿ 

ಗಿರಿ ತುರ್ತು ಪರಿಸ್ಥಿತಿ ಇದ್ದದರಿಂದ ಬೇಗ ಬೇಗ ಇಳಿದು ಹೋದ.. ಅವನ ಹಿಂದೆ ವಿನೋದ್ ಇಳಿದು ಹೋದರು.. ಮಿಕ್ಕವರು ತಮ್ಮ ತಮ್ಮ ಸಮಯ ತೆಗೆದುಕೊಂಡು ಕೆಳಗೆ ಇಳಿದಾಗ ಉಸ್ಸಪ್ಪ ಎನ್ನುವ ನಿಟ್ಟುಸಿರು ಒಂದು ಕಡೆ.. ಇನ್ನೊಂದು ಕಡೆ ಅಮೋಘ ಸಮಯ ಕಳೆದ ಖುಷಿ.. 

ಸ್ನಾನಾದಿಗಳಿಗೋಸ್ಕರ ಒಂದು ಪುಟ್ಟ ಮನೆಯನ್ನು ಬಾಡಿಗೆಗೆ ತೆಗೆದುಕೊಂಡು..ಸರ ಸರ ಎಲ್ಲರೂ ಸಿದ್ಧವಾದರು.. ಅಷ್ಟರಲ್ಲಿ ಕಿರಣ್ ಮತ್ತು ಸಿರಿ ಜೊತೆಯಾದರು... ಒಂದು ಅರ್ಧ ಘಂಟೆ.. ದೇವಸ್ಥಾನದ ಬಾಗಿಲಲ್ಲಿ ಇದ್ದೆವು.. 

ಸುಬ್ರಮಣ್ಯ ಸ್ವಾಮಿಯ ಮತ್ತು ಆದಿ ಸುಬ್ರಮಣ್ಯ ಸ್ವಾಮಿಯ ದರ್ಶನ.. ಹೋಟೆಲಿನಲ್ಲಿ ಕಾಫಿ, ಬೋಂಡಾ, ಮಸಾಲೆ ಪುರಿ.. ಗಡ್ ಬಡ್ ಐಸ್ಕ್ರೀಮ್.. ದೇವಸ್ಥಾನದ ಊಟ. ಆಹಾ.. ಭಾನುವಾರ ಸಂಜೆ ಸಕತ್ತಾಗಿಯೇ ಕಳೆಯಿತು.. 
ನಾವು ಒಂದು.ಒಂದು . ಹನ್ನೊಂದು 
ಬಸ್ ನಿಲ್ದಾಣಕ್ಕೆ ಹೊರಡುವಾಗ ಕಿರಣ್ ಮತ್ತು ಸಿರಿಗೆ ಬೈ ಹೇಳಿ.. ಬಸ್ಸಿನಲ್ಲಿ ಕೂತಾಗ ಸುಂದರವಾದ ೪೮ ಘಂಟೆಗಳನ್ನು ಕಳೆದ ಸಂತೃಪಿ ಎಲ್ಲರ ಮೊಗದಲ್ಲಿ.. !!!

****

"ಕೆಪಿ ತಮಾಷೆ ಗೊತ್ತಾ .. ಅಲೆಮಾರಿಗಳ, ಚಡ್ಡಿ ದೋಸ್ತುಗಳ,  ಮತ್ತು ಮಮಕಾರ ಹೊತ್ತ ಅಣ್ಣ ತಂಗಿ ತಮ್ಮಂದಿರ ಮತ್ತು ಬಂಧಗಳ ಸೊಗಸಾದ ಸಂಗಮವಾಗಿತ್ತು ಕಣೋ ... "



ಬೆಂದು ಪಕ್ವವಾದಗಲೇ  ಚಾರಣ ಸುಖ ಅನ್ನಿಸೋದು 


"ಹೌದು ಶ್ರೀ .. ಇದೊಂತರಹ ಮಜಾ ಇತ್ತು... ಸ್ಫೂರ್ತಿ ಇದ್ದ ಕೆಲವರು.. ದೈಹಿಕ ಶಕ್ತಿ ಇದ್ದ ಕೆಲವರು... ಮನೋಧೈರ್ಯ ಇದ್ದವರು ಕೆಲವರು.. ಕಲ್ಲು ಬಂಡೆಯನ್ನು ಅಲುಗಾಡಿಸುವ ಮಾತಿನ ಛಾತಿ ಇದ್ದವರು.. .ತಣ್ಣಗೆ ಇದ್ದುಕೊಂಡೇ ಧಮ್ ಎನ್ನಿಸುವ ಒನ್ ಲೈನರ್ ಹೇಳುವ, ಎಲ್ಲರೂ ಅಪವಾದ ಹೇರಿದರೂ ನಗು ನಗುತ್ತಾ ಹೆಜ್ಜೆ ಹಾಕುವ.. ಪತಿಯೊಡನಿದ್ದರೆ ನಾನು ಒಬ್ಬ ಸಿಪಾಯಿ ಎನ್ನುವವರು ಹೀಗೆ ಒಂದು ಅದ್ಭುತ ಸದಸ್ಯರ ತಂಡವಾಗಿತ್ತು.. ಆದರೂ... "

ಸೂರ್ಯ ಅಸ್ತಮಿಸುತ್ತಿಲ್ಲ.. ಬದಲಿಗೆ ನಾ ಮತ್ತೆ ಬರುತ್ತೀನಿ ಎನ್ನುತ್ತಿದ್ದಾನೆ 
"ಏನಪ್ಪಾ ಆದರೂ.. ಗೊತ್ತು ಬಿಡು.. ನಾನು ಶಿಖರ ತಲುಪಬೇಕಿತ್ತು ಅಂತ ತಾನೇ.. ಆಗಲೇ ಹೇಳಿದ್ದೆನಲ್ಲ.. ನಾನು ಮಾನಸಿಕವಾಗಿ ಸಿದ್ಧವಾಗಿ ಬಂದಿದ್ದೆ.. ಎಲ್ಲಿ ತನಕ ಆಗತ್ತೋ ಅಲ್ಲಿ ತನಕ ಅಂತ.. ಸಾಕು ಎನಿಸಿತು.. ಜೊತೆಯಲ್ಲಿ ತಂಗಿಯನ್ನು ಒಬ್ಬಳೇ ಬಿಟ್ಟು ಬರುವುದು ಹೇಗೆ.. ಅವಳೇನೋ ಕಲ್ಲನ್ನು ಮಾತಾಡಿಸಿ ಬರುತ್ತಾಳೆ.. ಆದರೆ ನನ್ನ ಜೊತೆ ಕಳಿಸಿದ ಮೇಲೆ.. ನನ್ನ ಜವಾಬ್ಧಾರಿ ಅಲ್ಲವೇ.. 
ಎಲ್ಲರೂ ಕುಮಾರಪರ್ವತದ ತುತ್ತ ತುದಿ ತಲುಪಿದ್ದರೇ ಸೊಗಸಾಗಿತ್ತು.. ಇರಲಿ ಬಿಡು..  ಮತ್ತೊಮ್ಮೆ ನಿನ್ನ ಮಡಿಲಿಗೆ ಬರುತ್ತೇನೆ.. "
ನಿನಗಾಗಿ ಹೀಗೆ ಕಾಯುತ್ತಿರುವೆ ಎಂದ ಕೆಪಿ.. !!!

"ಶ್ರೀ ನಾನೂ ನಿನಗೆ ಕಾಯುತ್ತೇನೆ.. ಇನ್ನೊಂದು ಸುಂದರ ತಂಡವನ್ನು ಎದುರು ನೋಡುತ್ತಾ.. "

"ಬೈ ಕೆಪಿ ಸಿಗೋಣ ಮತ್ತೆ ಅಕ್ಟೋಬರ್ ಮಾಸದಲ್ಲಿ.. "

ಮೈಕೈ ತೊಳೆದು ಸಜ್ಜಾಗಲು ನಿಂತ ಕೆಪಿ 

ಕೆಪಿ ಒಮ್ಮೆ ಹಲ್ಲು ಬಿಟ್ಟು ಆಕಳಿಸಿತು. ತನ್ನ ಮೈಯಲ್ಲಿ ಪ್ಲಾಸ್ಟಿಕ್ ಕಸಗಳು ಕಡಿಮೆಯಾದ ಖುಷಿಯಲ್ಲಿ.. ಮಳೆಗಾಲದ  ಕಾಲವನ್ನು ಎದುರು ನೋಡುತ್ತಾ ಮತ್ತೆ ಮೈತೊಳೆದುಕೊಂಡು ಮತ್ತೆ ಹಸಿರಾಗಲು ಕೆಪಿ ಕಾಯುತ್ತಿತ್ತು.. ಆ ಹಸಿರಾದ ನೆನಪನ್ನು ಹೊತ್ತು ನಾವು ಮಾಯಾನಗರಿಯ ಕಡೆಗೆ ಪಯಣ ಬೆಳೆಸಿದೆವು.. ಮತ್ತೊಮ್ಮೆ ಅಕ್ಟೋಬರ್.. ಮತ್ತೊಮ್ಮೆ ಕೆಪಿ.. !!!

Friday, December 22, 2017

ಭಾವನೆಗಳ ಭತ್ತದ ... ಬತ್ತದ.... ಕಣಜ.. ಕುಮಾರ ಪರ್ವತ

ಮೊಬೈಲ್ ಚಾರ್ಜ್ ಕಮ್ಮಿ ಆಗ್ತಾ ಇದೆ..

ಹೌದ ಸರಿ ಚಾರ್ಜ್ ಮಾಡ್ತೀನಿ 

ಲ್ಯಾಪ್ಟಾಪ್ ಚಾರ್ಜ್ ಕಡಿಮೆ ಆಗಿದೆ 

ಸರಿ ಚಾರ್ಜ್ ಆಗ್ತೀನಿ 

ಶ್ರೀ ನಿನ್ನ ಎನರ್ಜಿ ಕಡಿಮೆ ಆಗಿದೆ.. 

ಸರಿ ಕುಮಾರ ಪರ್ವತಕ್ಕೆ  ಹೋಗಿ ಬರ್ತೀನಿ.. 

ಅರೆ ಇದೇನಿದು ಸಡನ್ ವಿಭಿನ್ನ ಉತ್ತರ ಅಂದಿರಾ.. ಅದು ಕುಮಾರ ಪರ್ವತದ ತಾಕತ್ತು.. ನನ್ನ ಇಷ್ಟವಾದ ಸಂಖ್ಯೆ ಎಂಟು.. ಇದು ನನ್ನ ಎಂಟನೇ ಬಾರಿಗೆ ಕುಮಾರ ಪರ್ವತದ ಮಡಿಲಿಗೆ.. 

ಹೇಳಬೇಕಿದ್ದು ನೂರಾರು.. ಹೇಳೋಕೆ ಹೊರಟ್ಟಿದ್ದು ಹತ್ತಾರು.. ಹೇಳಿದ್ದು ಒಂದೆರಡು.. ಹೌದು.. ಪ್ರತಿ ಬಾರಿಯೂ ಕುಮಾರಪರ್ವತ ವಿಭಿನ್ನ ಅನುಭವ ಕೊಡುವುದಷ್ಟೇ ಅಲ್ಲದೆ.. ನನ್ನ ಭಾವುಕ ಮನಸ್ಸಿಗೆ ಇನ್ನಷ್ಟು ಸ್ಫೂರ್ತಿ ಕೊಡುವ ತಾಣವೂ ಹೌದು.. 
ಮಹಾ ಪರ್ವ... ಇಲ್ಲಿಂದ ಶುರು.. 
ನವೆಂಬರ್ ಹತ್ತು.. ಚಳಿ ಚಳಿ ಎನ್ನುವ ರಾತ್ರಿ .. ಕುಕ್ಕೆ ಸುಬ್ರಮಣ್ಯದ ಬಸ್ಸಿನಲ್ಲಿ ಕೂತಾಗ.. . ಚಾರಣಕ್ಕೆ ಸಿದ್ಧವಿಲ್ಲದ ದೇಹ.. ಶ್ರೀ ನಾನಿದ್ದೇನೆ.. ನಡಿ ಆಗಿದ್ದು ಆಗಲಿ ಎನ್ನುವ ಮನಸ್ಸು.. ಎಂದಿನಂತೆ ಮನಸ್ಸಿನ ಮಾತು ದಾರಿ ದೀಪವಾಯಿತು.. 

ರಾತ್ರಿ ಇಡೀ.. ಮಾತು ಮಾತು ಮಾತು.. ಮುಗಿಯದ ಮಾತು.. ನಗು.. ಬೆಳಗಿನ ಜಾವ ಮಂಜರಾಬಾದ್ ಕೋಟೆ ಆಸು ಪಾಸಿನಲ್ಲಿ ಬಸ್ಸು ಹೆಡ್ ಲ್ಯಾಂಪ್ ಕೆಟ್ಟಿದೆ ಎಂದು ನಿಂತಾಗ.. ಸ್ವಲ್ಪ ಕಣ್ಣು ಎಳೆಯಲು ಶುರುಮಾಡಿತು.. ಆಗಿದ್ದಾಗಲಿ ಸ್ವಲ್ಪ ನಿದ್ದೆ ಮಾಡುವ ಅಂತ.. ಕಣ್ಣು ಮುಚ್ಚಿದ್ದಷ್ಟೇ ಗೊತ್ತು.. ಇಳೀರಿ ಇಳೀರಿ ಇದೆ ಕಡೆಯ ಸ್ಟಾಪ್ ಎಂದಾಗ ಕಣ್ಣು ಬಿಟ್ಟರೆ ಕುಕ್ಕೆ ತಲುಪಿಯಾಗಿತ್ತು.. 

ಮನಸು ಸಾಂದ್ರತೆಯನ್ನು ಕಳೆದುಕೊಂಡು ಹಕ್ಕಿಯ ಹಾಗೆ ಹಗುರವಾಗುವ ಸಮಯ.. ಬೆಳಗಿನ ವಿಧಿಗಳನ್ನು ಮುಗಿಸಿ.. ಕುಮಾರಕೃಪಾ ಹೋಟೆಲಿನಲ್ಲಿ ಇಡ್ಲಿ ವಡೆ ಬನ್ನು ತಿಂದು.. ಹೊರಟಾಗ ಹೊಟ್ಟೆ ಹಗುರವಾಗಿತ್ತು.. ಕಾರಣ ನನ್ನ ಮಾಮೂಲಿ ಬ್ಯಾಟಿಂಗ್ ಮಾಡಿರಲಿಲ್ಲ.. :-)

"ಹೆಜ್ಜೆ ಹೆಜ್ಜೆ ಮೇಲೆ ಹೆಜ್ಜೆ ಇಡುತ.. ಬಂದ ಬಾಲ ರಾಮ" ಎನ್ನುವ ಕರುಣಾಮಯಿ ಚಿತ್ರದ ಹಾಡಿನಂತೆ..  ನಿಧಾನವಾಗಿ ಚಾರಣದ ಪಥದಲ್ಲಿ ಹೆಜ್ಜೆ ಇಡುತ್ತಾ ಸಾಗಿದೆ.. ದೇಹಕ್ಕೆ ಮಾತು ಬೇಕಿರಲಿಲ್ಲ.. ಮನಸ್ಸು ಮೌನಕ್ಕೆ ಶರಣಾಗಿತ್ತು.. ಮಧ್ಯೆ ಮಧ್ಯೆ ಧಾರಾವಾಹಿಗಳ ನಡುವೆ ನುಸುಳಿ ಬರುವಂತೆ.. ಕೊಂಚ ಮಾತು.. ಕೊಂಚ ನಗು.. ಅಷ್ಟೇ.. 

ತಲೆಯಲ್ಲಿ ಯಾವ ಯೋಚನೆಗಳು ಇರಲಿಲ್ಲ.. ತುತ್ತ ತುದಿ ತಲುಪುತ್ತೇವೆಯೋ ಇಲ್ಲವೋ ಗೊಂದಲ ಇರಲಿಲ್ಲ.. ಅನಿರ್ಧಿಷ್ಟ ಪ್ರಯಾಣ ಮಾಡುವ ಹಾಗೆ ಸುಮ್ಮನೆ ಹೊರಟಿದ್ದೆ.. ನಿತ್ಯ ಹರಿದ್ವರ್ಣ ಕಾಡಿನ ಹಾದಿ... ಹಕ್ಕಿಗಳ ಕಲರವ.. ಜೀರಂಬೆಗಳ ಝೇಂಕಾರ.. ಅಲ್ಲೆಲ್ಲೋ ಸದ್ದಾಗುವ ಎಳೆಗಳ  ನಿನಾದ.. ಗಾಳಿ ಎಲ್ಲಿ ಬೀಸಿತೋ.. ಎಲ್ಲಿ ಬಂತೋ ಅರಿಯದೆ ಮರಗಿಡಗಳ ತೂಗಾಟ.. ಹಸಿಯಾದ ಆದರೆ ಗಟ್ಟಿಯಾದ ಮಣ್ಣು.. ಆ ಮಣ್ಣಿನ ಹದವಾದ ವಾಸನೆ.. ಒಂದು  ರೀತಿಯ ಭಾವುಕ ಲೋಕವನ್ನು ಸೃಷ್ಟಿಸಿತ್ತು.. 

ಆಶ್ಚರ್ಯ ಅಂದರೆ.. ಹಿಂದಿನ ಚಾರಣಗಳಲ್ಲಿ ಬೆವರಿನ ಮುದ್ದೆಯಾಗಿ.. ಸುಸ್ತಾಗಿ.. ಸಾಕಪ್ಪ ಅನ್ನಿಸುತ್ತಿದ್ದ ಮನಸ್ಸು ಇಂದು.. ಅದರ ಯಾವ ಸುಳಿವು ಕೊಡದೆ ಸುಮ್ಮನಿದ್ದದ್ದು.. ಜೊತೆಯಲ್ಲಿ ಆಯಾಸ.. ಮನಸ್ಸಿನ ಮಾತನ್ನು ಕೇಳುತ್ತಾ ಮೆಲ್ಲಗೆ ನನ್ನಿಂದ ದೂರವಾಗಿದ್ದು.. ಇದುವರೆಗೂ ನನಗೆ ಈ ಅನುಭವ ಆಗಿರಲಿಲ್ಲ.. ಜೊತೆಯಿದ್ದಿದ್ದರೆ ಅಂದೇ ಕುಮಾರ ಪರ್ವತದ ತುತ್ತ ತುದಿ ತಲುಪಿಬಿಡುತ್ತೇನೆ ಎನ್ನುವ ವಿಶ್ವಾಸ.. ಆದರೂ ಸುಮ್ಮನೆ ಏನೇನೋ ನಿರ್ಧಾರ ತೆಗೆದುಕೊಳ್ಳದೆ.. ಕವಿರತ್ನ ಕಾಳಿದಾಸ ಚಿತ್ರದಲ್ಲಿ ಅಣ್ಣಾವ್ರು ಹೇಳಿದಂತೆ "ಸ್ನಾನಗೀನ ಎಲ್ಲಾ ದೇಹಕ್ಕಲ್ಲ ಕಂದಾ ಮನಸ್ಸಿಗೆ" ತರಹ ಈ ಚಾರಣ ದೇಹಕ್ಕಲ್ಲ ಮನಸ್ಸಿಗೆ ಎಂದು ಮೊದಲೇ ನಿರ್ಧರಿಸಿ ಆಗಿದ್ದರಿಂದ ಸುಮ್ಮನೆ ಹೆಜ್ಜೆ ಹಾಕುತ್ತಾ ಹೋದೆ.. 

ಮಧ್ಯೆ ಭೀಮನಕಲ್ಲಿನ ಹತ್ತಿರ ಸಿಗುವ ತೊರೆಯಲ್ಲಿ ಸ್ವಲ್ಪ ಹೊತ್ತು ವಿಶ್ರಮಿಸಿಕೊಂಡು ಹೊಟ್ಟೆ  ತುಂಬಾ ನೀರು ಕುಡಿದು ಮತ್ತೆ ಹೊರತು ನಿಂತಾಗ ಮತ್ತೆ ಹುರುಪು ಮೈಗೂಡಿತ್ತು. .. 

ಭಟ್ಟರ ಮನೆಗೆ ತಲುಪಿದಾಗ ಹೊಟ್ಟೆ ಪಕ ಪಕ ಅನ್ನುತ್ತಿತ್ತು.. ಭಟ್ಟರಿಗೆ ನಮಸ್ಕರಿಸಿದಾಗ.. ನಿಮ್ಮನ್ನು ನೋಡಿದ್ದೇನೆ ಎಂದಾಗ ಖುಷಿಯಾಯಿತು.. ಇದು ನನ್ನ ಎಂಟನೇ ಚಾರಣ ಎಂದಾಗ.. ಹಳೆಯ ಘಟನೆಗಳನ್ನು ನೆನಪಿಸಿಕೊಂಡರು.. ಪುಷ್ಕಳವಾದ ಊಟ... ಹಾಗೆ ಸ್ವಲ್ಪ ಹೊತ್ತು ಮಲಗುವ ಅಂದು... ಸೂರ್ಯಾಸ್ತ ಆಗುವ ಹೊತ್ತಿಗೆ ಭಟ್ಟರ ಮನೆಯ ಮುಂದಕ್ಕೆ ಹೋಗಿ ಸೂರ್ಯಾಸ್ತದ ಸೊಬಗನ್ನು ಸವಿಯುವ ಎಂಬ ಹಂಬಲ ಹೊತ್ತು ನಿದ್ದೆ ಮಾಡಿದೆ.. ಕಣ್ಣು ಬಿಟ್ಟಾಗ ಆಗಲೇ ಕತ್ತಲೆ ಶುರುವಾಗಿತ್ತು.. 

ಮರುದಿನಕ್ಕೆ ಮತ್ತೆ ಚಾರಣಕ್ಕೆ ಸಿದ್ಧವಾಗಬೇಕಾದ್ದರಿಂದ ಒಂದಷ್ಟು ವ್ಯಾಯಾಮ ಆಗಲಿ ಎಂದು ಜೀವದ ಗೆಳೆಯನೊಡನೆ ಸುತ್ತು ಹಾಕಿ ಬಂದೆ.. ಒಂದಷ್ಟು ಮೌನ.. ಸಿಕ್ಕಾಪಟ್ಟೆ ಮಾತು.. ನಗು.. ಹಾಸ್ಯ.. ಒಂದಷ್ಟು ಗೊಂದಲಗಳ ನಿವಾರಣೆ.. 

ವಾಪಸ್ ಬಂದಾಗ ನಮ್ಮ ಜೊತೆ ಬಂದಿದ್ದವರು ಚಳಿಗೆ ಬೆಂಕಿ ಹಾಕಿದ್ದರು.. ಅದರ ಜೊತೆಯಲ್ಲಿ ಮತ್ತೆ ಒಂದಷ್ಟು ಚಿತ್ರಗಳು.. ತಮಾಷೆ.. ಸುಂದರ ಸಮಯ ಕಳೆದದ್ದೇ ಗೊತ್ತಾಗಲಿಲ್ಲ.. 

ಹೊಟ್ಟೆ ತುಂಬಾ ಊಟ ಮಾಡಿ ಮಲಗಿದ್ದೆ ಗೊತ್ತು.. ಬೆಳಿಗ್ಗೆ ಆಗಲೇ ದಿನಕರ ತನ್ನ ಕಚೇರಿಗೆ ಬಂದು ತುಂಬಾ ಹೊತ್ತಾಗಿತ್ತು.. ಪ್ರಾತಃವಿಧಿ ಮುಗಿಸಿ.. ಮತ್ತೆ ಅಲೆದಾಟ.. ಆದರೆ ಇಂದು ಸುಮ್ಮನೆ ಒಂದು ಕಡೆ ಕೂತು ಹೊಟ್ಟೆ ತುಂಬುವಷ್ಟು ಮಾತು ಇದೆ ತಲೆಯಲ್ಲಿ ಇತ್ತು.. ಆರಾಮಾಗಿ ಕೂತು ಮಾತಾಡಿದೆವು.. ಸುಮಾರು ಮೂರು ತಾಸು ಗಾಳಿಯ ವೇಗದಲ್ಲಿ ಓಡಿತು.. 
ಒಂದಕ್ಕೆ ಒಂದು ಆಸರೆ.. !
ಕುಮಾರ ಪರ್ವತ ನೋಡುತ್ತಾ ಕೂತೆ.. ಅದರೊಳಗಿಂದ ಹಿಂದಿನ ಅನುಭವಗಳು ಸಿನಿಮಾದ ರೀತಿಯಲ್ಲಿ ಕಣ್ಣ ಮುಂದೆ ಬಂತು.. ಒಂದೊಂದಾಗಿ ಸಿನೆಮಾಗಳು ಖಾಲಿಯಾಗುತ್ತಾ ಬಂದಾ ಹಾಗೆ.. ಬಿಳಿಯ ಪರದೆಯ ಮೇಲೆ ಮೂಡಿದ್ದು.. ಶ್ವೇತಾ ವಸ್ತ್ರಧಾರಿ.. ನಂತರ ಆ ರವಿಯ ಪ್ರಭೆ ಕಾಣಿಸಿತು.. ಅದರೊಂದಿಗೆ ಒಂದಷ್ಟು ಮಾತು.. ಒಂದಷ್ಟು ದುಃಖ ಹಂಚಿಕೊಂಡೆ.. ಇದು ನ್ಯಾಯವೇ ಅಂದೇ.. ಆ ಕಡೆಯಿಂದ ನನ್ನ ನೆಚ್ಚಿನ ಮುಗುಳುನಗೆಯೊಂದೇಸಿಕ್ಕಿದ್ದು .. ಕಣ್ಣುಗಳು ನೀರಿನ ಬಲೂನಾಗಿತ್ತು.. ಒಂದು ಸಣ್ಣ ಗುಂಡು ಸೂಜಿ ಅಲ್ಲ ಹೂವಿನ ಪಕಳೆ ತಾಕಿದ್ದರು.. ಜೋಗದ ಜಲಪಾತವಾಗುತ್ತಿತ್ತು.. ಮೆಲ್ಲನೆ ನನಗೆ ಅರಿಯದೆ ಒಂದು ಹತ್ತಿಯ ವಸ್ತ್ರ ಕಣ್ಣ ಮುಂದೆ ಬಂದು ನಿಂತಿತು.. ಆಶ್ಚರ್ಯ.. ಹತ್ತಿಯ ಬಟ್ಟೆ ಸುಯ್ ಅಂತ  ಕಣ್ಣಲ್ಲಿನ ಲಿಂಗನಮಕ್ಕಿಯನ್ನು ಹೀರಿಕೊಂಡಿತು.. ಮನಸ್ಸು, ಕಣ್ಣುಗಳು ಹಗುರವಾದವು.. 



ಸೂರ್ಯ ಆಗಲೇ ನೆತ್ತಿಯನ್ನು ಸುಡಲು ಶುರುಮಾಡಿದ್ದ.. ಸರಿ ವಾಪಾಸ್ ಹೋಗೋಣ ಅಂತ.. ಮತ್ತೆ ಭಟ್ಟರ ಮನೆಗೆ ಬಂದೆವು.. ಸ್ನಾನ ಮಾಡಿ ಹೊರಬಂದೆ.. ಭಟ್ಟರು ನನ್ನ ಜನಿವಾರ ನೋಡಿ.. ಓಯ್.. ಸಂಧ್ಯಾವಂದನೆ ಮಾಡುವುದುಂಟೇ ಅಂದರು.. ಪರಿಕರ ಕೊಟ್ಟರೆ ಖಂಡಿತ ಅಂದೇ.. ಮುಂದಿನ ಮೂವತ್ತು ನಿಮಿಷ ಆ ಪರ್ವತದ ಮಡಿಲಲ್ಲಿ ಧ್ಯಾನ, ಸಂಧ್ಯಾವಂದನಾ ಆಹಾ ಆಗಲೇ ಹಗುರಾಗಿದ್ದ ಮನಸ್ಸಿಗೆ ರೆಕ್ಕೆ ಮೂಡಿತು.. 

ಭರ್ಜರಿ ಊಟ.. ಮತ್ತೆ ಇಳಿಯಲು ಶುರುವಾಯಿತು ನಮ್ಮ ಪಯಣ.. ಭಟ್ಟರ ಜೊತೆಯಲ್ಲಿ ಒಂದು ಚಿತ್ರ ನೆನಪಿಗೆ.. ಜೊತೆಯಲ್ಲಿ ಅಗಾಧವಾದ ಉತ್ಸಾಹದ ಮೂಟೆಯನ್ನು ಹೊತ್ತು ಇಳಿಯಲು ಶುರುವಾಯಿತು ಪಯಣ.. 
ತಂಡದ ಜೊತೆ ಒಂದು ಚಿತ್ರ 

ಯಾಕೋ ಮನಸ್ಸು ಮೂಕವಾಗಬೇಕು ಎನ್ನಿಸಿತು.. ಇರಲಿ ಮನಸ್ಸಿಗೂ ಒಂದಷ್ಟು ವಿಶ್ರಾಂತಿ ಬೇಕಲ್ಲವೇ.. ನನ್ನ ಹಿಂದೆ ಮುಂದೆ ತಮಾಷೆಯ ಮಾತುಗಳು..  ಪ್ರಕೃತಿಯ ಕಲರವ ಯಾವುದು ನನ್ನ ಕಿವಿಗೆ ಬೀಳುತ್ತಿರಲಿಲ್ಲ.. ಶಾಂತಿ, ನಿಶ್ಯಬ್ಧ.. ಮನಸ್ಸಿಗೆ ನೆಮ್ಮದಿ ಇಷ್ಟೇ ಕಣ್ಣ ಮುಂದೆ ಇದ್ದದ್ದು.. 

ನನ್ನ ಪ್ರೀತಿಯ ಗೆಳೆಯ ಕೇಳಿದ "ತನ್ಹಾಯಿ ಬೇಕಿತ್ತು" ಅದಕ್ಕೆ ಅಂದೇ.. ಓಕೇ ಶ್ರೀ ಎಂದು ಬೆನ್ನು ತಟ್ಟಿತಾಗ ಮನಸ್ಸಿಗೆ ಆನಂದ.. 

ಆಹಾ.. ಈಗ ನನ್ನ ಫಾರ್ಮ್ ಗೆ ಬರುತ್ತಿದ್ದೇನೆ.. ಫೀಲಿಂಗ್ ಬೆಟರ್ ಅಂದೇ.. ಸೂಪರ್ ಎಂದಿತು ಅಶರೀರವಾಣಿಗಳು.. 
ಸವಾಲು, ಜವಾಬು.. ಎಲ್ಲಕ್ಕೂ ಸಿದ್ಧ.. 

ಮುಂದೆ ನೆಡೆದದ್ದು ಮ್ಯಾಜಿಕ್.. ಆಯಾಸವಿಲ್ಲದೆ.. ಬೆಟ್ಟದ ಬುಡ ತಲುಪಿದಾಗ ಆರಾಮ್ ಎನ್ನಿಸಿತು.. 

ನದಿಯ ಕಡೆ ಪಯಣ.. ನದಿಯ ನೀರಲ್ಲಿ ಸ್ವಲ್ಪ ಹೊತ್ತು ಧ್ಯಾನ.. ಮತ್ತೆ ಬಾಸ್ ಗಣಪನ ದರ್ಶನ.. ಮನಸ್ಸಿಗೆ ಇನ್ನಷ್ಟು ಮುದ ನೀಡಿತು.. 
ಬೆಳಕಿನಲ್ಲಿ ದೇವಸ್ಥಾನ 

ಕುಕ್ಕೆ ಸುಬ್ರಮಣ್ಯನ ದೇವಸ್ಥಾನಕ್ಕೆ ಬಂದಾಗ.. ಕಾಲುಗಳು ಪದ ಹೇಳುತ್ತಿದ್ದವು .. ಆದರೆ ಆ ಮಹಾಮಹಿಮ ಸನ್ನಿಧಿ. ಜೊತೆಯಲ್ಲಿ ನೆಡೆಯುತ್ತಿದ್ದ ಉತ್ಸವ ಮೂರ್ತಿಯ ಮೆರವಣಿಗೆ... ಆ ಗಜರಾಜನ ಗಾಂಭೀರ್ಯ ನೆಡಿಗೆ.. ದೇವಸ್ಥಾನದೊಳಗೆ ಹಚ್ಚುತ್ತಿದ್ದ ಸಾಲು ಸಾಲು ಹಣತೆಗಳು.. ಜೊತೆಯಲ್ಲಿ ನಮ್ಮ ಅಳಿಲು ಸೇವೆಯೂ ತಲುಪಿತು..

ಸಾಲು ಸಾಲು ದೀಪಗಳು 
ಗಜರಾಜನ ವೈಭವ 
ದರ್ಶನ ಮಾಡಿ.. ನಮಿಸಿ.. ದೇವಸ್ಥಾನದ ಪ್ರಸಾದ ಸೇವಿಸಿದ ಮೇಲೆ ಮತ್ತಷ್ಟು ಹುರುಪು ತುಂಬಿತು.. 
ಶಕ್ತಿ ಹುಮ್ಮಸ್ಸು ತುಂಬಿದ ಚಾರಣ 

ಮೊದಲೇ ನಿಗಧಿ ಪಡಿಸಿದ್ದ ಬಸ್ಸಿನಲ್ಲಿ ಬಂದು ಕಾಲು ಚಾಚಿ ಮಲಗಿದಾಗ ಸ್ವರ್ಗ ಸುಖ.. ಬೆಳಿಗ್ಗೆ ಎಷ್ಟು ಹೊತ್ತಿಗೆ ಬೆಂಗಳೂರು ತಲುಪಿದೆವೋ ಅರಿವಿಲ್ಲದಂತಹ ನಿದ್ದೆ ... 

ಆರಾಮಾಗಿ ಮನೆಗೆ ಬಂದು.. ಸ್ನಾನ ಮಾಡಿ ಆಫೀಸಿಗೆ ಹೋದಾಗ ಪುನರ್ ನೆನಪುಗಳು ಕಾಡತೊಡಗಿದವು.. 

ಯಾವುದೇ ಏರು ಪೇರಿಲ್ಲದೆ, ತ್ರಾಸದಾಯಕವಿಲ್ಲದ ಚಾರಣ ಇದಾಗಿತ್ತು.. ಕುಮಾರಪರ್ವತದ ಇನ್ನೊಂದು ಅನುಭವ ಮನಸ್ಸಿಗೆ ಮುದ ನೀಡಿತು.. ಮತ್ತೆ ನಮ್ಮ ಅಲೆಮಾರಿಗಳು ತಂಡವನ್ನು ಮತ್ತೆ ಹಳಿಗೆ ತಲುಪುವ ನಿರ್ಧಾರ ಮಾಡಿಕೊಂಡಿತು ಈ ಮನಸ್ಸು.. 
ಅಲೆಮಾರಿಗಳ ಪಯಣ ಶುರು 


೨೦೧೮ ರಲ್ಲಿ ಅಲೆಮಾರಿಗಳು ತಂಡದ ಸಾಹಸ ಮತ್ತೆ ಕೊಂಚ  ಬಹು ಧೀರ್ಘ ವಿರಾಮದ ನಂತರ ಮತ್ತೆ ಮುಂದುವರೆಯಲಿದೆ!!!!

ಹೆಸರಿಗೆ ಒಂದು ಗುರುತು.. 

Wednesday, January 16, 2013

ಕುಮಾರ ಪರ್ವತ ಚಾರಣ - ೨೦೧೩ರ ಜನವರಿ ೫-೬!

"ಸಿಂಧೂರ ಲಕ್ಷ್ಮಣನೆಂದರೆ ಸಾಕು ಶೌರ್ಯವು ಮೈಯಲ್ಲಿ ತುಂಬುವುದು" ಸಿಂಧೂರ ಲಕ್ಷಣ ಚಿತ್ರದ ಮೈನವಿರೇಳಿಸುವ ಗೀತೆಯ ಹಾಗೆ ಕುಮಾರ ಪರ್ವತ ಎಂದರೆ ಸಾಕು ಅರ್ಧ ರಾತ್ರಿಯಲ್ಲೂ ಕೂಡ ಏನೋ ಒಂದು ಹೊಸತನ ಮೈ ಮನಸನ್ನು ಆವರಿಸಿಕೊಳ್ಳುತ್ತದೆ.

ವರ್ಷ ೨೦೧೨ ಆರಂಭದಲ್ಲಿ ಇಲ್ಲಿಂದಲೇ ಶುರುಮಾಡಿದ ಅಲೆಮಾರಿಗಳ ಪ್ರವಾಸ, ವರ್ಷಾಂತ್ಯದಲ್ಲಿ ಇಲ್ಲಿಯೇ ಮುಗಿಸುವ ಆಸೆ ಕೈಗೂಡಲಿಲ್ಲ. ಆದರೇನು ಕುಮಾರ ಪರ್ವತ ಚಾರಣ ಎಂದರೆ ನಮ್ಮ ಅಲೆಮಾರಿಗಳ ತಂಡ ಕೊಡುವ ಉತ್ತರ ಒಂದೇ "ಹೋಗೋಣ"

ಈ ಬಾರಿ ಸಂದೀಪ್, ಪ್ರಶಾಂತ್  ಗಿರೀಶ್, ರವಿಕಾಂತ್, ದರ್ಶನ್ ನನ್ನನ್ನು ಜೊತೆಗೂಡಿದರು. ಆರು ಮಂದಿ ಶುಕ್ರವಾರ ರಾತ್ರಿ ೮.೫೦ಕ್ಕೆ ಬಸ್ಸಿನಲ್ಲಿ ಕೂತಾಗ ಒಂದು ರೀತಿಯ ಸಂತಸಭರಿತ ಕುತೂಹಲ. ಪ್ರತಿಬಾರಿಯೂ ಹೊಸ ಅನುಭವ ಕೊಡುತಿದ್ದ ಪರ್ವತ ಈ ಬಾರಿ ತನ್ನೊಡಲಲ್ಲಿ ಏನು ಹುದುಗಿಸಿಕೊಂಡಿದೆಯೋ ಎನ್ನುವ ತವಕ.

ಶನಿವಾರ ಬೆಳಿಗ್ಗೆ  ಐದಕ್ಕೆ ಕುಕ್ಕೆ ಸುಬ್ರಮಣ್ಯದ ನಿಲ್ದಾಣದಲ್ಲಿ ಬಸ್ ನಿಂತಾಗಷ್ಟೇ ಎಚ್ಚರ.  ಬ್ಯಾಗ್ಗಳನೆಲ್ಲ ಒಟ್ಟು ಗೂಡಿಸಿಕೊಂಡು ಬೆಳಗಿನ ಉಪಹಾರಕ್ಕೆ ಬಂದೆವು. ಆಗಲೇ ಅನೇಕ ತಂಡಗಳು ಚಾರಣಕ್ಕೆ ಹೊರಡಲು ಸಿದ್ಧವಾಗಿದ್ದವು.  ಲಘು ಉಪಹಾರ ಮುಗಿಸಿ ಹೆಜ್ಜೆ ಹೆಜ್ಜೆ ಮೇಲೆ ಹೆಜ್ಜೆ ಇಡುತ್ತ ಅಲೆಮಾರಿಗಳು ತಂಡದ ರಜತ ಸಂಭ್ರಮದ ಚಾರಣಕ್ಕೆ (ಹೌದು ಅಲೆಮಾರಿಗಳ ತಂಡದ ಇಪ್ಪತೈದನೆಯ ಯಾನ ಇದು) ಚಾಲನೆ ನೀಡಿದೆವು.

ಮೊದಲ ಹಂತದ ಚಾರಣ - ಭೀಮನ ಕಲ್ಲು

ಮಾತು ಕಮ್ಮಿ ಹೆಜ್ಜೆ ಹೆಚ್ಚು ಎನ್ನುತ್ತಾ ಸದ್ದಿಲ್ಲದೇ ಮೊದಲ ಐದು ಕಿ.ಮಿ. ಗಳನ್ನೂ ಸಾಗುವ ಉತ್ಸಾಹ ತೋರಿದೆವು. ಕಾಡಿನ  ಏರು ಹಾದಿ ತ್ರಾಸದಾಯಕವಾಗಿತ್ತು. ಆದ್ರೆ ಉತ್ಸಾಹ ಇಮ್ಮಡಿಸುತಿತ್ತು.  ಸುಸ್ತಾದಗಲೆಲ್ಲ ಕೊಂಚ ವಿಶ್ರಾಂತಿ, ಕೊಂಚ ತಿನಿಸು, ಹರಟೆ ತಮಾಷೆ ಮಾತುಗಳು, ಹೊಸ ಹುಡುಗು ದರ್ಶನ್ ಹುಮ್ಮಸ್ಸಿನಲ್ಲಿ ಚಿತ್ರಗಳನ್ನು ತೆಗೆಯುತ್ತ ಇನ್ನಷ್ಟು ಹುರುಪನ್ನು ತುಂಬುತ್ತಿದ್ದರು. ಸುಮಾರು ೨.೫ ಕಿ.ಮಿ.ಗಳು ನಡೆದು ಭೀಮನ ಕಲ್ಲು ತಲುಪಿದಾಗ ಅಲ್ಲಿದ್ದ ತಂಡದ ಜೊತೆ ಮಾತಾಡಿ, ಅವರು ಹೋದ ಮೇಲೆ ಆ ಬೃಹತ್ ಬಂಡೆಯ ಮೇಲೆ ನಮ್ಮ ತ್ರಾಣಗೊಂಡಿದ್ದ ದೇಹವನ್ನು ಹಾಗೆ ಗಾಳಿಗೆ ಮೈಯೊಡ್ಡಿ ವಿರಮಿಸಿದೆವು.

ಎರಡನೇ ಹಂತ - ಪುಷ್ಪಗಿರಿಯ ಹುಲ್ಲುಗಾವಲು
ಅಂದು ಕೊಂಡಂತೆ ಸರಿ ಸುಮಾರು ಬೆಳಗಿನ ೯.೩೦ರ ಸಮಯಕ್ಕೆ ಪುಷ್ಪಗಿರಿ ಹುಲ್ಲುಗಾವಲಿನ ತಾಣಕ್ಕೆ ಬಂದೆವು. ಕೊಂಚ ದೀರ್ಘ ವಿಶ್ರಾಂತಿ ಬೇಕು ಎಂದು ಬಯಸಿದ್ದರಿಂದ ಅಲ್ಲಿಯೇ ಕುಳಿತು ದಣಿವಾರಿಸಿಕೊಳ್ಳುತ್ತ ತಂದಿದ್ದ ಕ್ಯಾರೆಟ್, ಸೌತೆಕಾಯಿ, ಬಿಸ್ಕೆಟ್, ಬ್ರೆಡ್ ಖಾಲಿ ಮಾಡಿದೆವು. ಕಳೆದ ಬಾರಿ ಇದೆ ಜಾಗದಲ್ಲಿ ಕುಳಿತು ಹರಟಿದ ಸುಂದರ ಕ್ಷಣಗಳನ್ನು ಮೆಲುಕು ಹಾಕುತ್ತ ಮತ್ತೆ ಮುಂದೆ ಹೊರಟೆವು.
ದೂರದ ಬೆಟ್ಟ ನುಣ್ಣಗೆ! ಮೊದಲ ಝಲಕ್ !!!

ಮೂರನೇ ಹಂತ - ಅರಣ್ಯ ಇಲಾಖೆ ಕಚೇರಿ 
ಎಲ್ಲರೂ ಒಂದೇ ನಿರ್ಧಾರಕ್ಕೆ ಬಂದೆವು..ಭಟ್ಟರ ಮನೆಯಲ್ಲಿ ನಾಳೆ ಊಟ ಮಾಡುವ ಎಂದು. ಸರಿ ನಿಧಾನವಾಗಿ ಸುಸ್ತಾದ ಕಾಲುಗಳನ್ನು ಎಳೆದುಕೊಂಡು ಪುಟ್ಟ ಪುಟ್ಟ ಹೆಜ್ಜೆ ಇಡುತ್ತ ಅರಣ್ಯ ಇಲಾಖೆಯ ಕಚೇರಿಯ ಕಡೆ ನಡೆದೆವು. ಚಾರಣ ಮಾಡಬೇಕಿದ್ದ ಪರ್ವತ ತುತ್ತ ತುದಿ ಕಾಣುವ ಇಲ್ಲಿನ ನೋಟ ಮನೋಹರ. ದರ್ಶನ್, ಗಿರೀಶ್, ರವಿ ಕಾಂತ್ ಉತ್ಸುಕರಾಗಿದ್ದರು.  ಕಚ ಕಚ ಅಂತ ಕೆಲ ಚಿತ್ರಗಳನ್ನು ಕ್ಯಾಮೆರ ಪೆಟ್ಟಿಗೆಯೊಳಗೆ ಸೆರೆ ಹಿಡಿದಾಗಿತ್ತು.  "ಅಗೋ ನೋಡಿ ಭಟ್ಟರ ಮನೆ" ಎಂದ ತಕ್ಷಣ ಇನ್ನೊಮ್ಮೆ ಕ್ಯಾಮೆರ ಸದ್ದು ಮಾಡಿತು. ಕಚೇರಿ ಹತ್ತಿರ ನಿಧಾನವಾಗಿ ಬರುತಿದ್ದಾಗ ಅರಣ್ಯಾಧಿಕಾರಿ ಕುಕ್ಕೆಗೆ ಹೊರಟಿದ್ದರು. ನಮ್ಮನ್ನು ನೋಡಿದ ತಕ್ಷಣ
"ಓಹ್ ನಮಸ್ಕಾರ ಚೆನ್ನಾಗಿದ್ದೀರಾ, ಏನೋ ಈ ಸಲ ಬಹಳ ಹೊತ್ತು ಮಾಡಿಬಿಟ್ರಲ್ಲ. ಡಿಸೆಂಬರ್ ತಿಂಗಳಲ್ಲಿ ಬರುತ್ತೀರಾ ಎಂದು ಕೊಂಡಿದ್ದೆ"
"ನಮಸ್ಕಾರ ಸರ್..ನಾವು ಚೆನ್ನಾಗಿದ್ದೇವೆ..ಹೌದು ಬರಬೇಕಿತ್ತು...ಹುಡುಗರಿಗೆ ರಜ ಇರಲಿಲ್ಲ ಹಾಗಾಗಿ ತಡವಾಯಿತು"
"ಒಳ್ಳೇದು ಒಳ್ಳೆ ಸಮಯಕ್ಕೆ ಬಂದಿದ್ದೀರಿ...ಬನ್ನಿ ತಿಂಡಿ ತಿನ್ನೋದಾದ್ರೆ ನೋಡಿ ಅಲ್ಲಿ ಸೊಂಪಾಗಿ ನೆರಳಿದೆ..ಅಲ್ಲೇ ಕುಳಿತು ವಿಶ್ರಾಂತಿ ತೆಗೆದುಕೊಂಡು ನಿಧಾನವಾಗಿ ಹೋಗಿ..ನನಗೆ ಸ್ವಲ್ಪ ಕೆಲಸ ಇದೆ ಕುಕ್ಕೆ ಹೋಗ್ತಾ ಇದ್ದೀನಿ...ನಮ್ಮ ಹುಡುಗ ಇದ್ದಾನೆ ನಿಮಗೆ ಏನಾದರು ಅನುಕೂಲ ಬೇಕು ಅಂದ್ರೆ ಮಾಡಿಕೊಡ್ತಾನೆ:
ಇಷ್ಟು ಆತ್ಮೀಯವಾಗಿ ಮಾತಾಡಿಸುವ ವ್ಯಕ್ತಿ ಈ ಕಾಡಿನಲ್ಲಿ ಸಿಕ್ಕಾಗ ಸುಸ್ತಾದ ದೇಹಕ್ಕೆ ಮತ್ತೆ ಉಲ್ಲಾಸ ತುಂಬಿಕೊಳ್ಳುವುದರಲ್ಲಿ ಸಂದೇಹವೇ ಇಲ್ಲ ಅಲ್ಲವೇ.
ಗಿರೀಶ್ ತಂದಿದ್ದ ಖಡಕ್ ರೋಟಿ, ಮೊಸರು, ಉಪ್ಪಿನಕಾಯಿ, ದರ್ಶನ್ ತಂದಿದ್ದ ಚಪಾತಿ ಎಲ್ಲ ಅನಾಯಾಸವಾಗಿ ತಮ್ಮ ಪೂರ್ವ ನಿರ್ಧಾರಿತ ಗುರಿ ಸೇರಿದವು. ಒಂದು ಹದಿನೈದು ನಿಮಿಷ ನಿದ್ದೆ ಮಾಡಿ ಸುಮಾರು ೧೨.೦೦ ಘಂಟೆಗೆ ಮುಂದಿನ ಮಹಾನ್ ಯಾನಕ್ಕೆ ಹೊರಟೆವು.

ನಾಲ್ಕನೆ ಹಂತ - ಕಲ್ಲು ಮಂಟಪ 
ಕುಮಾರ ಪರ್ವತ ಚಾರಣ ಸಾಮಾನ್ಯವಾಗಿ ಕಠಿಣ ಅನ್ನುವ ಪದ ಉಪಯೋಗಕ್ಕೆ ಬರುವುದು ಇಲ್ಲೇ.  ಸೂರ್ಯ ತನ್ನ ಮನೆಯಲ್ಲಿರುವ ಒಲೆಯನ್ನು ಉರಿಸುತ್ತಾ ಅತಿ ಹೆಚ್ಚು ಶಾಖ ಹೊಮ್ಮಿಸುವ ಸಮಯ ಇದಾಗಿರುತ್ತೆ. ನೆರಳಿಗೆ ಒಂದು ಗಿಡ ಮರವಿರುವುದಿಲ್ಲ, ಮತ್ತೆ ಏರು ಹಾದಿ ದೇಹದಲ್ಲಿನ ಶಕ್ತಿಯನ್ನು ಉಡುಗಿಸಿಬಿಡುತ್ತದೆ . ಸಾಕಪ್ಪ ಈ ಪರ್ವತದ ಸಹವಾಸ ಎನ್ನುವಷ್ಟು ಹತಾಶೆ ಮೂಡಿಸುತ್ತದೆ ಇದಕ್ಕೆ ನಿದರ್ಶನವಾಗಿ ಇನ್ನೊಂದು ತಂಡದಲ್ಲಿ ಬಂದಿದ್ದ ಮೂರು ನಾಲ್ಕು ಹುಡುಗಿಯರು ಅವರನ್ನು ಕರೆದುಕೊಂಡು ಬಂದಿದ್ದ ಆ ತಂಡದ ನಾಯಕನಿಗೆ ಹಿಗ್ಗಾ ಮುಗ್ಗಾ ಬಯ್ತ ಇದ್ದರು! ಈ ಬಿಸಿಲು, ನೆರಳಿಲ್ಲ..ಎಷ್ಟು  ನೀರು ಕುಡಿದರೂ ಸಾಕಾಗೊಲ್ಲ, ಸಮತಟ್ಟಾದ ಹಾದಿಯಿಲ್ಲ ಅಂತ ಸಹಸ್ರನಾಮಾರ್ಚನೆ ಮಾಡುತ್ತಿದ್ದರು.

ನಮ್ಮ ಜೊತೆ ಬಂದಿದ್ದ ಮಿಕ್ಕೆಲ್ಲರೂ ಹುಮ್ಮಸ್ಸಿನಿಂದ ನಿಧಾನವಾಗಿ ಕಲ್ಲು ಮಂಟಪದೆಡೆಗೆ ಸಾಗುತಿದ್ದರು. ನನಗೆ ತುಂಬಾ ಸುಸ್ತಾಗುತಿತ್ತು. ಒಂದು ನಿಮಿಷ ಸಾಕಪ್ಪ...ಈ ಬಾರಿ ಆಗೋಲ್ಲ.ವಾಪಸ್ ಭಟ್ಟರ ಮನೆಯಲ್ಲಿ ಇರ್ತೀನಿ ನೀವು ಹತ್ತಿ ಬನ್ನಿ ಎಂದು ಕೂಗಿ ಹೇಳುವ ಆಸೆಯಾಗುತ್ತಿತ್ತು. ಆದ್ರೆ ಅವರು ನನ್ನಿಂದ ತುಸು ದೂರದಲ್ಲಿದ್ದರೂ. ಮತ್ತೆ ನಾನೇ ಈ ಚಾರಣಕ್ಕೆ ಹೋಗೋಣ ಅಂತ ಎಲ್ಲರನ್ನು ಕರೆದು ನಾನೇ ಹಿಂದೆ ಬಂದರೇ....ಛೆ ಛೆ ಏನು ಮಾಡೋದು ಅನ್ನುವಾಗ ತಲೆಗೆ ಬಂದದ್ದು...

"ಆಗದು ಎಂದು.... ಕೈಲಾಗದು ಎಂದು
ಕೈ ಕಟ್ಟಿ ಕುಳಿತರೆ
ಸಾಗದು ಕೆಲಸವೂ ಮುಂದೆ"

ಮೂರು ಅಣ್ಣಂದಿರು ....ನನ್ನ ಅಣ್ಣ ( ಅಪ್ಪ ), ನಮ್ಮ ಅಣ್ಣ (ಅಣ್ಣಾವ್ರು ), ಬಾಲಣ್ಣ (ಕನ್ನಡ ಚಿತ್ರನಟ ಬಾಲಕೃಷ್ಣ)  ನೆನಪಿಗೆ ಬಂದರು, ಮೂವರಿಗೂ ಮನದಲ್ಲಿಯೇ ವಂದಿಸಿ ನಿಮ್ಮ ಛಲ, ಸಾಹಸ ಮನೋಭಾವದ ಒಂದು ಅಂಶ ನನಗೆ ಕೊಡಿ ಎಂದು ಬೇಡುತ್ತಾ ಹತ್ತಲು ಶುರು ಮಾಡಿದೆ...ಆಶ್ಚರ್ಯ...ಅನಾಯಾಸವಾಗಿ ಕಲ್ಲು ಮಂಟಪದೆಡೆಗೆ ಸಾಗುತ್ತ ಹೋದೆ...
ಸಂದೀಪ್ ಹೇಳಿದ್ರು "ಶ್ರೀಕಾಂತ್..ಇ-ಮೇಲ್ ನಲ್ಲಿ ೨.೩೦ಕ್ಕೆ ಕಲ್ಲು ಮಂಟಪ ಅಂತ ಹಾಕಿದ್ರಿ...ನೋಡಿ ಸಮಯ ಈಗ ಸರಿಯಾಗಿ ೨.೩೦ ಅಂದಾಗ...ಮನಸ್ಸು ಹಾರಾಡುತ್ತಿತ್ತು!

ಐದನೇ ಹಂತ - ಶೇಷ ಪರ್ವತ
ಗಿರೀಶ್, ದರ್ಶನ್ "ಸರ್ ಅದೇನಾ ಕುಮಾರಪರ್ವತ? "
"ಇಲ್ಲ ಗಿರಿ ಅದು ಶೇಷ ಪರ್ವತ..ಅದನ್ನು ದಾಟಿ ಹೋದರೆ ಸಿಗುತ್ತೆ ಕುಮಾರಪರ್ವತ "
"ಮತ್ತೆ ಎಲ್ಲಿ ಉಳಿಯೋದು, ಎಲ್ಲಿ ಮಲಗೋದು"
"ಏನು ಯೋಚನೆ ಬೇಡ..ಎಲ್ಲರಿಗೂ ಸುಸ್ತಾಗಿದೆ...ಶೇಷಪರ್ವತ ಸುಮಾರು ೪.೩೦ - ೫.೦೦ ಘಂಟೆಗೆ ತಲುಪುತ್ತೇವೆ. ಅಲ್ಲಿಂದ ಒಂದು ಐದು ನಿಮಿಷ ನಡೆದರೆ ಕಾಡು ಸಿಗುತ್ತೆ...ಅಲ್ಲಿಯೇ ನಮ್ಮ ಬಿಡಾರ ಹೂಡಿ ಬಿಡೋಣ..ಚೆನ್ನಾಗಿ ಊಟ ಮಾಡಿ..ರಾತ್ರಿ ಮಲಗಿ ಬೆಳಿಗ್ಗೆ ಹೊಸ ಹುರುಪಿಂದ ಕುಮಾರಪರ್ವತಕ್ಕೆ ಹೋಗುವ.."
ಸಂದೀಪ್, ಪ್ರಶಾಂತ್ ಕೂಡ ಇದು ಸರಿಯಾದ ಯೋಚನೆ ಎಂದರು.
ಮುಂದಿನ ಮಾರ್ಗ ತುಂಬಾ ಕಡಿದಾಗಿತ್ತು. ಇಲ್ಲಿಯ ತನಕ ಬಂದಾಗಿದೆ..ಇನ್ನೂ ಹಿಂದಕ್ಕೆ ಹೋಗುವ ಮಾತೆ ಇರಲಿಲ್ಲ..ನಿಧಾನವಾಗಿ ಶೇಷಪರ್ವತದ ತುದಿಯಲ್ಲಿ ನಿಂತಾಗ ಸುಮಾರು ಐದು ಘಂಟೆ. ಸೂರ್ಯ ಅಸ್ತಮಿಸಲು ಸಿದ್ದವಾಗುತಿದ್ದ!
ಆನಂದದ ಸಮಯ - ಅಲೆಮಾರಿಗಳು ಹಕ್ಕಿಗಳ ಹಾಗೆ ಹಾರಾಡುವ ಸಮಯ !

ಆರನೇ ಹಂತ - ಬಿಡಾರ - ಊಟ - ನಿದ್ದೆ 
ಪ್ರಶಾಂತ್ ಮತ್ತು ನಾನು ತಂದಿದ್ದ ಬಿಡಾರಗಳನ್ನು ಬಿಚ್ಚಿ ಸಿದ್ದ ಮಾಡುತಿದ್ದೆವು, ಗಿರೀಶ್, ದರ್ಶನ್ ಸಂದೀಪ್ ಸಹಾಯಕ್ಕೆ ಬಂದರು. ರವಿ ಅದಕ್ಕೆ ಬೇಕಾದ ಅನುಕೂಲ ಮಾಡುತ್ತಾ, ರಾತ್ರಿ ಒಲೆಗೆ ಬೇಕಾದ ಸೌದೆಗಳನ್ನು ಒಟ್ಟು ಗೂಡಿಸುತ್ತಿದ್ದರು. ಮೊದಲಿಗೆ ನಮ್ಮ ಗುಡಾರ ಸಿದ್ಧವಾಯಿತು. ಕಟ್ಟಿಗೆ, ಒಣಗಿದ ಎಲೆ, ಒಲೆ ಕೂಡ ಸಿದ್ಧವಾಯಿತು. ಇನ್ನು ಬೇಕಾಗಿದ್ದು ನೀರು.
ಪ್ರಶಾಂತ್ ಗುಡಾರವನ್ನು ನೋಡಿಕೊಳ್ಳುವ ಹೊಣೆ ಹೊತ್ತುಕೊಂಡ...ಸಂದೀಪ್ ಸೂರ್ಯಾಸ್ತದ ಚಿತ್ರ ತೆಗೆದುಕೊಂಡು ಬರ್ತೀನಿ ಅಂತ ಹೋದರು..ಮಿಕ್ಕ ನಾಲ್ವರು ನೀರು ತರಲೆಂದು ಹೊರಟೆವು. ಸಂಜೆಯ ಸಮಯ..ದಿನವಿಡೀ ಬಿರು ಬಿಸಿಲಿನಲ್ಲಿ ನೆಡೆದು ಹಣ್ಣಾಗಿದ್ದ ದೇಹಕ್ಕೆ ಮುಸ್ಸಂಜೆಯ ತಂಗಾಳಿ ಮುದ ತರುತ್ತಿತ್ತು. ಇದ್ದ ಬಾಟಲಿಗಳು ನೀರಿನಿಂದ ತುಂಬಿ ತುಳುಕುತ್ತಿತ್ತು.

ಓಲೆ ಹಚ್ಚಿ ಪಾತ್ರೆ ಇಟ್ಟಿದ್ದೆ ತಡ...ಎಂ.ಟಿ.ಆರ್ ನ ಸಿದ್ಧಪಡಿಸಿದ ಊಟಕ್ಕೆ ನಾಲಿಗೆ ಕಾತರಿಸುತಿತ್ತು.  ಒಂದೊಂದೇ ಪ್ಯಾಕೆಟ್ ಅಂತ ಸುಮಾರು ೧೨ ಪ್ಯಾಕ್ಕೆಟ್ಗಳು ಎಲ್ಲರ ಹೊಟ್ಟೆಯೊಳಗೆ ಶಿವೈಕ್ಯ ಹೊಂದಿತು. ಸ್ವಲ್ಪ ಚೇತನ ಬಂದ ಮೇಲೆ ಮತ್ತೆ ಹರಟಲು ಶುರು ಮಾಡಿದೆವು.
ಊಟದ ಸಮಯ...ಬಿಸಿ ಬಿಸಿ ಊಟ...ಆಹಾ...!

ಇಲ್ಲಿಯ ತನಕ ಬ್ಯಾಗಿನಲ್ಲಿ ಸುಮ್ಮನೆ ಕೂತಿದ್ದ ಕ್ಯಾಮೆರ ನಿಧಾನವಾಗಿ ಹೊರಬಂದು ಸದ್ದು ಮಾಡಲು ಶುರುಮಾಡಿತು. ನಮ್ಮ ಹೊಟ್ಟೆ ತುಂಬಿತ್ತು..ಕ್ಯಾಮೆರಗೂ ಹೊಟ್ಟೆ ತುಂಬಿಸಿ ಸಂತಸ ನಿದ್ರೆಗೆ ನಮ್ಮನ್ನು ಅರ್ಪಿಸಿಕೊಂಡೆವು.
ಬೆಳಗಿನ ಚಳಿಗೆ ಬಿಸಿ ಬಿಸಿ ಬಿಸಿಸೂಪ್  ಕುಡಿದ ಆ ಕ್ಷಣ !!!

ಏಳನೇ ಹಂತ - ಕುಮಾರ ಪರ್ವತ
ಬೆಳಿಗ್ಗೆ ಬೇಗನೆ ಎದ್ದು ಪ್ರಶಾಂತ್ ತಯಾರಿಸಿದ ಸೂಪ್ ಕುಡಿದು ಚಳಿಗೆ ಮರಗಟ್ಟಿದ್ದ ದೇಹವನ್ನು ಅರಳಿಸಿಕೊಂಡು ಕುಮಾರಪರ್ವತ ಶಿಖರಾಗ್ರಕ್ಕೆ ಬಂದು ನಿಂತಾಗ ಕಂಡ ದೃಶ್ಯ ನೋಡುತ್ತಾ ಮನದಾಳದಲ್ಲಿ ಪದಗಳು ಹುಟ್ಟಿ ಕೊಂಡವು

ಉದಯಿಸಲು ಬಂದ ಉದಯರವಿ!

"ಮೂಡುತ ಬರುವ ಸೂರ್ಯ
ತನ್ನ ಹಿಂದೆ ಇದ್ದ ಕತ್ತಲನ್ನು ಬಡಿದೋಡಿಸಿ
ಹೊಸ ಬೆಳಗಿಗೆ ನಾಂದಿ ಹಾಡುವನು"
ಸುತ್ತ ಮುತ್ತಲಿನ ದೃಶ್ಯ...ನಯನ ಮನೋಹರ!

ಶಿಖರಾಗ್ರ ತಲುಪಿ..ಇಲ್ಲಿಯ ತನಕ ನಮ್ಮನ್ನು ಸುರಕ್ಷಿತವಾಗಿ ಕರೆದು ತಂದ ಆ ದೇವನಿಗೆ ಮನಸಾರೆ ವಂದಿಸಿ, ಕೆಲ ಸುಂದರ ಕ್ಷಣಗಳನ್ನು ಕಳೆದು ಮತ್ತೆ ನಮ್ಮ ಗೂಡಿಗೆ ಹೊರಟೆವು.
ಸುರಕ್ಷಿತವಾಗಿ ತಲುಪಿಸಿದ ದೇವರಿಗೆ ಒಂದು ನಮನ 
ಸುತ್ತಮುತ್ತಲು ಕಾಣುವ ನಯನ ಮನೋಹರ ದೃಶ್ಯಗಳು ಕಣ್ಣಿಗೆ ಹಬ್ಬವನ್ನೇ ಉಂಟು ಮಾದುತಿದ್ದವು!

ದೂರದಲ್ಲಿ ಶೇಷ ಪರ್ವತ!
ಒಬ್ಬೊಬ್ಬರಿಗೆ ಒಂದೊಂದು ರೀತಿ ನೆನಪಲ್ಲಿ ಉಳಿಯುವ ಈ ಕುಮಾರಪರ್ವತ ನಮ್ಮ ಪ್ರಶಾಂತ್ ಜ್ಞಾನ ಪ್ರಭಾವಳಿಯಲ್ಲಿ ಮಿಂದ ಬಗೆ ಹೀಗಿತ್ತು!

ಜ್ಞಾನ ಪ್ರಭಾವಳಿಯಲ್ಲಿ ಅಲೆಮಾರಿಗ ಪ್ರಶಾಂತ್ !

ನೆನಪಿನ ಪುಟದಲ್ಲಿ ದಾಖಲಾಗುವಂತೆ ಅಲೆಮಾರಿಗಳ ತಂಡದ ಒಂದು ಚಿತ್ರ ಶಿಖರಾಗ್ರದಲ್ಲಿ.


ಕುಮಾರ ಪರ್ವತಕ್ಕೆ ಸಾಗುವ ಕಡಿದಾದ ಹಾದಿ. ಮಳೆಗಾಲದಲ್ಲಿ ಇದು ಸದಾ ಹರಿಯುವ ಜಲಪಾತ!...

ಮಳೆಗಾಲದಲ್ಲಿ ಇದು ಜಲಪಾತದ ಹಾದಿ..!

ಸಂದೀಪ್ ನಾವೆಲ್ಲಾ ಬರುವಷ್ಟರಲ್ಲಿ  "ಅಲೆಮಾರಿಗಳು" ತಂಡದ ಹೆಸರನ್ನು ಪರ್ವತದ ಹೃದಯ ಭಾಗದಲ್ಲಿ ಅರಳಿಸಿದ್ದರು.

ಅ;ಅಲೆಮಾರಿಗಳು ತಂಡದ ಹೆಸರು ಭೂತಾಯಿಯ ಹಣೆಯ ಮೇಲೆ!

ನಮ್ಮ ಬ್ಯಾಗ್ಗಳನ್ನ ತೆಗೆದುಕೊಂಡು..ಒಂದು ಸುಂದರ ಚಿತ್ರವನ್ನು ಚಿತ್ರೀಕರಿಸಿ ಕುಮಾರಪರ್ವತಕ್ಕೆ ಶುಭ ವಿದಾಯ ಹೇಳಿದೆವು. 

ನಮ್ಮ ಗುಡಾರದ ಜೊತೆ ನಾವು...!
ಮುಂದಿನ ಪಯಣ ಎಡಬಿಡದೆ ಭಟ್ಟರ ಮನೆ ತಲುಪುವುದಾಗಿತ್ತು. ಗಡಿಯಾರ ಬೆಳಗಿನ ಹತ್ತು ಘಂಟೆ ಎಂದು ಉಲಿಯುತ್ತಿತ್ತು!

ಎಂಟನೆ ಹಂತ - ಭಟ್ಟರ ಮನೆ ಹಾಗೂ ರುಚಿಕರ ಭೋಜನ!
ಸರಿ ಸುಮಾರು ೧೩.೦೦ ಘಂಟೆಗೆ ಭಟ್ಟರ ಮನೆಗೆ ಬಂದೆವು..ಪುಷ್ಕಳ ಭೋಜನ ಸಿದ್ಧವಾಗಿತ್ತು. ನಗುಮೊಗದಲ್ಲಿ ಭಟ್ಟರ ಮನೆಯ ಸಿಬ್ಬಂಧಿಗಳು ಮಾತಾಡಿಸಿದರು. ಶುಚಿರ್ಭೂತರಾಗಿ ಹೊಟ್ಟೆಗೆ ಸಮಾರಾಧನೆಯ ಯೋಗ ಮಾಡಿಕೊಟ್ಟೆವು. ಭಟ್ಟರ ಮನೆಯವರ ಜೊತೆ ಒಂದು ಚಿತ್ರ ನಮ್ಮ ನೆನಪಿಗೆ ಸಿಕ್ಕಿತು. ಕಾಫಿ ಕೇಳಿದೆವು ಅದು ಸಿಕ್ಕಿತು.  ಇನ್ನೇನು ಬೇಕು ಆ ಬೆಟ್ಟದಲ್ಲಿ ಓ ಎಂದರೆ ಯಾರು ಸಿಗುತ್ತಾರೆ?..ಅಂತಹ ರುದ್ರ ರಮಣೀಯ ತಾಣದಲ್ಲಿ ನೆರಳು, ನೀರು, ಆಹಾರ ಯಾರೇ ಕೊಟ್ಟರೂ ಆ ದೇವರ ಸಾಕ್ಷಾತ್ಕಾರವಾದಷ್ಟು ಖುಷಿಯಾಗುತ್ತದೆ ಅಲ್ಲವೇ...ಅಂತಹ ಒಂದು ಸುಂದರ ಜಾಗ ಭಟ್ಟರ ಮನೆ!

ದೇವರ ಮನೆ...ಭಟ್ಟರ ಮನೆಯ ಸಿಬ್ಬಂಧಿ ವರ್ಗದ ಜೊತೆಯಲ್ಲಿ ಅಲೆಮಾರಿಗಳು !

ಒಂಭತ್ತನೇ ಹಂತ - ಕುಕ್ಕೆ ಸುಬ್ರಮಣ್ಯ ಹಾಗು ದೇವರ ದರ್ಶನ!
ಕುಮಾರ ಪರ್ವತದಿಂದ ಹೊರಡಬೇಕಲ್ಲ ಎನ್ನುವ ಭಾರವಾದ ಮನಸು, ಏನೋ ಸಾಧಿಸಿದ ಹುಮ್ಮಸ್ಸಿನಿಂದ ಹಗುರಾದ ದೇಹ ಇವರೆಡನ್ನು ಹೊತ್ತು ಸುಮಾರು ೧೭.೦೦ ಘಂಟೆಗೆ ಬೆಟ್ಟದ ತಪ್ಪಲಿಗೆ ಬಂದೆವು. ಕೊಂಚ ಕಾಲ ವಿರಮಿಸಿಕೊಂಡು..ಸ್ನಾನಕ್ಕೆ ಕುಮಾರಧಾರ ನದಿಗೆ ಹೊರಟೆವು. ನದಿ ಸ್ನಾನ ಮುಗಿಸಿ ಹೊರಬಂದಾಗ.ಒಂದು ಆಘಾತ ಕಾಡಿತ್ತು..ಬಂದ ಆಟೋ ರಿಕ್ಷಾದಲ್ಲಿ ಸಂದೀಪ್ ಅವರ ಕ್ಯಾಮೆರಾದ ಟ್ರೈ-ಪಾಡ್ ಬಿಟ್ಟಿದ್ದೆವು. ನಮ್ಮೆಲ್ಲರ ಪ್ರಾರ್ಥನೆ ಒಂದೇ ಆಗಿತ್ತು..ಹೇಗಾದರೂ ಆ ಕಳೆದ ಹೋದ ವಸ್ತು ನಮ್ಮ ಕೈಸೇರಲಿ ಎಂದು.  ಅಲ್ಲಿಯೇ ಇದ್ದ ಕೆಲ ಆಟೋ ರಿಕ್ಷ ಚಾಲಕರಿಗೆ ನಾವು ಬಂದ ಆಟೋ ಚಾಲಕನ ಗುರುತು ಎಲ್ಲ ಹೇಳಿದೆವು...ಹತ್ತೇ ನಿಮಿಷ ಟ್ರೈ-ಪಾಡ್ ನಮ್ಮ ಕೈಯಲ್ಲಿ ಇತ್ತು. ಎಲ್ಲ ಒಳ್ಳೆಯ ಮನಸಿನ ಮಹಿಮೆ...ದೇವರ ಮಹಿಮೆ...!
ದೇವರ ದರ್ಶನವಾಯಿತು..ಮನಸಿಗೆ ಸಂತಸವಾಯಿತು. ದೇವಸ್ಥಾನದಲ್ಲಿ ಊಟ ಮಾಡುವಷ್ಟು ಸಮಯವಿಲ್ಲದ ಕಾರಣ, ಅಲ್ಲಿಯೇ ಒಂದು ಹೋಟೆಲ್ನಲ್ಲಿ ಸಿಕ್ಕ ಮಸಾಲೆ ದೋಸೆ, ಕಾಫಿಯನ್ನು ಹೀರಿ ಬಸ್ ನಿಲ್ದಾಣದ ಕಡೆಗೆ ಹೆಜ್ಜೆ ಹಾಕಿದೆವು.

ಹತ್ತನೇ ಹಂತ - ವಾಪಸ್ ಬೆಂಗಳೂರಿಗೆ
ನಿಲ್ದಾಣಕ್ಕೆ ಬಂದಾಗ ವೈಭವ ಬಸ್ ನಮಗಾಗಿ ಕಾದಿತ್ತು. ನಮ್ಮ ಲಗೇಜ್ಗಳನ್ನೂ ಅದರ ಸ್ಥಾನಕ್ಕೆ ಸೇರಿಸಿ ಸೀಟಿಗೆ ಒರಗಿ ಕಣ್ಣು ಮುಚ್ಚಿದೆವು...ಕಣ್ಣು ಬಿಟ್ಟಾಗ ಯಾರಿ ನವರಂಗ ಸರ್ಕಲ್ ಅಂತ ಹೇಳುತ್ತಿದ್ದ ಧ್ವನಿ ಎಚ್ಚರಿಸಿತು.  ಮೆಜೆಸ್ಟಿಕ್ ನಿಲ್ದಾಣಕ್ಕೆ ಬಂದು..
ಆ ಚಳಿಯಲ್ಲಿ ಬಿಸಿ ಬಿಸಿ ಕಾಫಿ ಕುಡಿದು ಎಲ್ಲ ಸ್ನೇಹಿತರಿಗೆ ವಿದಾಯ ಹೇಳಿದಾಗ ಕಾಫಿ ಅಂಗಡಿಯಲ್ಲಿದ್ದ ಕುಕ್ಕೆ ಸುಬ್ರಮಣ್ಯ ದೇವರ ಚಿತ್ರ ಒಮ್ಮೆ ಕಣ್ಣು ಮಿಟುಕಿಸಿದ ಅನುಭವವಾಯಿತು. ಅಲ್ಲಿಯೇ ದೇವರಿಗೆ ನಮ್ಮ ನಮನಗಳನ್ನು ಸಲ್ಲಿಸಿ ನಮ್ಮ ನಮ್ಮ ಗೂಡಿಗೆ ಸೇರಿಕೊಂಡೆವು. 

Wednesday, January 9, 2013

Kumara Parvatha - The energiser Jan 5th & 6th 2013

(This is the Silver jubilee trip/trek in this bunch of wonderful team.  The successful 25th journey to the heart of mother nature is dedicated to all the members of alemaarigalu group. A special thanks to Sandeep K B who always nodded his head in the right direction whenever any trip or trek is planned, he is the man who gave a wonderful support to me in all the 25 trips with this group!)

Courtesy - Google Images
Kumara Parvatha, taking the name itself raises the energy level to a new high.  This time three new members came in line in the form of Utility Man - Girish Somashekar, Brave heart - Ravi Kanth (who came with us once), Enlightener and the rolling star Darshan along with regulars Always "yes" man Sandeep, and ever dependable and perfect plan executioner Prashanth.  With out any confusion in the mind, transportation to and fro (Bangalore - Kukke Subramanya) had been blocked in the reliable KSRTC services. 

We were chit chatting with the newbies as well as the regular members, we didn't see whats happening on the road, out of curiosity when we took the role of a peeping tom, we found that, even a bullock cart was overtaking our bus! The driver constantly on the phone yelling at the mechanic in the KSRTC Depo saying, accelerator's mouth is getting shut after 50-60Kms.  We were joking that, we will reach Kukke for next day dinner time, or we start trekking from Bangalore itself, or bus left Bangalore after 3-4 hours later than ours will be coming back from Kukke, and wishing our bus driver a Speedy Re"covery"!!!!!

Some minor spanner work in Kunigal, the bus started taking off, and once it surpassed zipping Rajahamsa, we couldn't control our happiness, me and prashanth clapped for the great drive, for which the co-passengers started looking at us like an aliens..............!. Darshan helped the driver not to close his eyes shutter in the deadly Shiradi Ghat road with his chatter box, and the driver also bonded with Darshan, saying, Guru, don't sleep i need your company!!!!.

Comfortably reached Kukke at around 5.00 AM on Saturday 5th Jan 2013, refreshed in the near by temple's outlets, and the energy yielding breakfast in Cafe Neo Mysore.  For our bad luck this time too we didn't get Vada along with Idli :-(

Clock ticked 6.40, packed the bag, and started the great trek to one of the tallest and most difficult trekking routes in Karnataka - The Peak of Kumara Parvatha!

Long way to go!
With short breaks at regular intervals, talking to fellow trekkers from the other groups, energising ourselves with chocolates, carrot, cucumber, biscuits, and of course the trade mark of alemaarigalu the fun quotient! As we did the last time, not to kill the time, skipped the bhattara mane, and landed at the forest office at 10.30 AM.  The officer who identified us, gave a warm welcome, showing a wonderful place for taking breakfast, and also allowed us to dump the excess luggage in his office. 

The breakfast proved the right fillip, the body responded very well, and again our next schedule to reach the Stone Mantap by 14.30 hours appearing in our dashboard. When the target blinking in front of the eyes, the soul always gives the right signals to the tired limbo's.  Even though before reaching the mantap, i wanted to retire from this trek, just closed my eyes, prayed the visible and invisible powers, and started taking the heavy steps towards the mantap!

With the great difficulty in the hot, hotter, and the hottest temperature slowly reached the mantap but at the exact time as per the schedule 14.30 :-).  A 30 minutes break, a stop gap nap recharged all of us, next journey was the most difficult phase of this trek.  A constant upper gradient in the sun bath proved too much for all of us.  The never say no spirit in all of us made sure that we were inching towards the beautiful sheshaparvatha before the Sunset. 

All the way there were few tired soldiers from some other groups who were cursing the tall Kumara parvatha, the route, the sun, and everything under the sun!

Taking the tired condition of all the team mates, we decided to camp in the forest after Shesha Parvatha for two factors 
1. No water spots on the peak after this forest stretch (We were proved wrong, and one of the group found a water spot near to the peak)  
2. To get the required energy for the next day.

Basking on the glory of Sun!
We pitched the tent, and Prashanth, Sandeep went in search of the fire wood, Darshan, Ravi, Giri, and myself went in search of Ganga Jal! 

Sunset was a disappointing act as evening was completely decked up with the mist!

The forest in the last stretch of the trek where we camped!

In another half an hour, the camp fire was fuming, vessel was hot, and the MTR ready to eat were slowly gulping down to the stomach.  
Cooking on the way!


We tasted everything we brought, that made the stomach a wonderful Been Bag, and after a small photo session, our souls said please behave like MMS, and we obliged, the result, we found snoring in the tent at 10.00 PM.

Colors ...Colors and more Colors!
Morning at 5.00 alarm screamed for the attention, the fire slept nicely whole night, we just patted its back, and it started dancing again, in that chilled weather, the hot and sour soup...aha..no words to describe.  Prashanth dished out one soup after the other, and  everyone happily had stomach full. 

The last steep stretch - A water fall in monsoon!

"Srikanth Sun rise, Srikanth Sun rise" Ravi started reminding again and again, we knew that, sunrise could be a dud again due to morning mist, and didn't wanted to disappoint the enthusiastic bunch, and since Sandeep decided to stay back to look after our belonging in the tent, five of us were with out any load, dashed towards the peak, and in less than 25 minutes we were on the peak!

Mother nature's hot cup of coffee ready!
A small prayer to salute the energy, meditation to enrich the soul, photo session to capture the lovely moments followed. 

Pooja, Fragrance everywhere!
All of us didn't satisfied reaching the peak, our dil was craving for more, so we found one small cone of stones seems to be bit waving our hands to summit it, we never disappointed our monkey's inhibition, one after the other started reaching the top, and found the view even more enticing. 

Alemaarigalu on the peak of Kumara Parvatha
Those few minutes spent on the peak was refreshing, and it just erased the tired moments experienced the previous day!

we started descending with a trembling feet, we packed our luggages, by that time, Sandeep etched the brand name "Alemaarigalu" on the heart of Kumara Parvatha. The fighting camp fire found almost breathing its last, just before that, we took a group snap along that rugged terrain. 

Camp site - Alemaarigalu!
The descent was as usual taxing on the knees, and the ankles, but slowly we started towards reaching our next target Bhattara mane for the necessary fillup! 

"Srikanth, always i felt peak will be in cone shape, but i was disappointed, the peak is a flat ground, i want to summit a peak which is sharp pointed or cone like structure. ooh ya..see that peak looks like sharp point one, want to summit that"

All of us said "Ravi, from the distance any hill look like that, but difficult to peak it, considering our long walk in the hot sun from yesterday"

But Ravi was the brave heart, when we were taking little gasp for breath, he said "I will keep going and summit it, by the time you guys reach the base, i will come down", and he disappeared, and found inching toward the peak called Bhattada Raashi, which ultimately named after him as "Ravi Parvatha" 

Bhattada Raashi alias "Ravi" Parvatha  (our Ravi kanth!)
Ravi peaked his Parvatha, and our fellow members freezed those frames, and we were at the base of the parvatha, when Sandeep said "Srikanth, you should also try", I folded my hands, and said "no!"

Sandeep normally a content man, said, "Srikanth, want to climb that, i will keep my bag here, and i will go and come back", and he left his bag there and dashed to the peak of Ravi Parvatha!

In the alemaarigalu group there is a trend, we are like sheep or monkey's, one acts..and the rest either Reacts or enacts!

Action....Reaction with some action!!!
Girish went ahead, Prashanth followed him by carrying his bag, I didn't wanted to miss this opportunity to look at Kumara Parvatha in an altitude, then forcibly Darshan too followed us.  The result all the six were in a pack on the peak!

When the intention of the effort is good, and encouraging, mother nature always supports.  We wanted to see the Kumara Parvatha is getting dipped in the clouds, but were not lucky all the time.  On the Ravi parvatha peak after spending few minutes just turned towards the Kumara Parvatha, we found him getting dressed up with the thin gown of clouds. What an amazing sight!

Kumara Parvatha wearing gown of clouds!
Again our descent started, inching towards Bhattara Mane started, after collecting the excess luggage kept in forest office, we drained in to Bhattara Mane mats spreading our tired body and soul for a short rest.  The staff of Bhattara mane responded to our request for meals, and they said it is ready to be consumed.


Alemaarigalu with Bhattara Mane Staff
Every one was too hungry, and they crossed their limit of daily consumption in the city. One round, followed by one more, then one more....After three rounds,  stomach like SRT decided to retire forcibly.  Lunch was too good to remember for the long time.  That too after a tiresome trek like in Kumara Parvatha. 

We thanked Bhattara Mane staff, and for Darshan it was a helicopter Thanks!

Comfortably reached the base, and slowly started walking towards the civilization, on the way, from last two days Darshan was crying for some spicy eateries, and found fried Boti's (like any pappad, or fried bisuits) in a petty shop a good companion, eating the boti's we reached Kumara Dhaara River in an auto riksha. 

After taking bath, Sandeep realised he left his "noble god" presented tripod in the first auto they came in.  We all prayed to the lord subramanya to retrieve the tripod, it is not only a gifted by a noble soul on this earth, but also it helped to freeze many magical moments in our group trips.  In the next ten minutes Sandeep, and rest of us were beaming with pride, the chink in our armory was back, and we all thanked the lord for honoring our prayers.

We entered the temple for a quick darshan, since Mahamangalaarathi was on the cards, the crowd was standing and waiting in a long que, since we didn't had enough time in our disposal, we had a glimpse of the lord in his abode, and we conveyed our gratitude to the lord for making this trek safe and more pleasurable, and prayed for our smooth return journey as well.  Again he blessed us, the moment we rested our body on the reserved seats of the KSRTC new found Karnataka Vaibhav, the sleeping goddesses welcomed us. z z z z z z z z z z z z z z z z.............  
"Navarang, Navarang" scream from the conductor helped us to return back to this world.  What a nice sleep!

So the exciting, monumental, enriching trek to Kumara Parvatha listed in the Alemaarigalu group as the Silver Jubilee outing, and got the ratings as the one of the best all time!