Thursday, January 31, 2019

ನವ ಮಾಸ.. ನವ ವರ್ಷ.. ನವಮಿ ಕುಮಾರಪರ್ವತ ಶಿರಸಾ ನಮಾಮಿ!!!

ರಾಜನೋ ರಾಣಿನೊ.. ಹೆಡ್ ಆರ್ ಟೈಲ್.. ಈ ರೀತಿಯ ಗೊಂದಲಗಳಿದ್ದಾಗ.. ತಲೆ ಕೆರೆದುಕೊಂಡೆ.. ಹುಲುಸಾಗಿ ಬೆಳೆದಿದ್ದ ತಲೆಗೂದಲ ಮಧ್ಯೆ ಒಂದು ಉಪಾಯ ಹೊಳೆಯಿತು.. 

ಪ್ರತಿ ಬಾರಿಯೂ ವಿಭಿನ್ನ ಅನುಭವ ಕೊಡುವ ಚಾರಣವೇ.. ಅಥವಾ ನೆನಪುಗಳ ಮಾಲೆ ಹೊತ್ತ ಪ್ರವಾಸವೇ.. ಬೇರೆ ಮಾತೆ ಇಲ್ಲ.. ಚರಣದಿಂದ ಚಾರಣಕ್ಕೆ ಎನ್ನುವ ಮಾತೆ ನಿಂತಿತು...

ಶಂಕರ್ ಗುರು ಚಿತ್ರದಲ್ಲಿ ಅಣ್ಣಾವ್ರಿಗೆ ಜೀವನದ ಒಂದು ಘಟನೆ ಬಹಳ ದುಃಖ ಕೊಡುತ್ತಿರುತ್ತದೆ.. ಅದಕ್ಕೆ ಸೇವಕನಿಗೆ ದುಡ್ಡು ಕೊಟ್ಟು ಚಾವಟಿಯಲ್ಲಿ ಹೊಡೆಸಿಕೊಂಡು ದೇಹ ದಂಡಿಸುತ್ತಾ ಇರುತ್ತಾರೆ.. ಆಗ ಹೇಳುವ ಮಾತು "ಆತ್ಮ ಶುದ್ಧಿಗಾಗಿ ಈ ದೇಹಕ್ಕೆ ಪ್ರಾಯಶ್ಚಿತ್ತ ಅನಿವಾರ್ಯ.." ಸೂಪರ್ ಮಾತುಗಳು ..  ಹೌದು.. ಗೊಂದಲದ ಬೀಡಾದಾಗ ಪ್ರಕೃತಿಯೇ ಮದ್ದು ಎನ್ನುತ್ತದೆ ನನ್ನ ಸರಳ ಜೀವನದ ಸೂತ್ರ..

ಶಿಖರದ ತುತ್ತ ತುದಿ.. ಅದುವೇ ಚಾರಣದ ಗಮ್ಮತ್ತು 
ಕುಮಾರಪರ್ವತ ಮತ್ತು ನನ್ನ  ನಡುವೆ ನೆಡೆದ ಮಾತುಕತೆಯೇ ಈ ಬರಹದ ತಿರುಳು.. 

"ಏನ್ಲಾ ಶ್ರೀ.. ಒಂದು ವರ್ಷದಿಂದ ಈ ಕಡೆ ತಲೆ ಹಾಕಿಯೇ ಇಲ್ಲ ಏನ್ ಕತೆ"

"ಇಲ್ಲ ಕಣೋ ಕೆಪಿ.. ಬರಬೇಕು ಬರಬೇಕು ಅಂತಲೇ ಇದ್ದೆ.. ಕೆಲಸ ಕೆಲಸ.. ಅದು ಇದು ಅಂತ ಮುಳುಗಿ  ಹೋಗಿದ್ದೆ.. ೨೦೧೮ ಪೂರಾ ಹಾಗೆ ಕಳೆಯಿತು.. ಹಗ್ಗದ ಮೇಲಿನ ಇರುವೆ ನೆಡಿಗೆ ನನ್ನದು.. ಹಾಗಾಗಿ ಬರಲಿಕ್ಕೆ ಆಗಲಿಲ್ಲ ಕಣೋ.. "

ಶ್ರಮ ಇರುವೆಯ ಹಾಗೆ ಇರಬೇಕು.. ಸದಾ ಪರಿಶ್ರಮ ಇರಲೇಬೇಕು.. !!!
                                                                                                                      ******

"ಮೊದಲಾದರೆ ಬರ್ತಾ ಇದ್ದೆ. .ಈಗ ನಿನಗೆ ಕೊಬ್ಬು ಹೆಚ್ಚಾಗಿದೆ.. "

"ಹೌದು.. ಎಲ್ಲರೂ ಅದೇ ಹೇಳ್ತಾ ಇದ್ದಾರೆ.. ಪ್ಯಾಂಟ್ ಸೈಜ್ ದೊಡ್ಡದಾಗಿದೆ.. ಕೊಬ್ಬು ಇಳಿಸಬೇಕು.." ಜೋರಾದ ನಗು

"ಸರಿ.. ಈ ಚಾರಣ ನಿನಗೆ ವಿಶಿಷ್ಟ.. ಸರಿ ನೀ ಹೇಳು.. ಆಮೇಲೆ ಕೂತು ಮಾತಾಡೋಣ"


"ಸರಿ ಗುರು"
                                                      ****************



ಒಂದು ಸಣ್ಣ ಕಿಡಿ ಸಾಕು.. ದೀಪ ಬೆಳಗೋಕೆ .. ಹಾಗೆ ನನ್ನ ನೆಚ್ಚಿನ ಕುಮಾರಪರ್ವತದ ಚಾರಣಕ್ಕೆ ಹೊರಡಬೇಕು ಎಂದಾಗ.. ನನ್ನ ಶಾಲಾ ದಿನಗಳಿಂದಲೂ ಜೊತೆಯಾಗಿರುವ ಶಶಿ ಮತ್ತು ವೆಂಕಿ.. ಮತ್ತು ವೆಂಕಿಯ "ಹೆಂಡತಿ" ಸೌಮ್ಯ ... ನನ್ನ ಮುದ್ದು ತಂಗಿ ರಶ್ಮಿ ಅಣ್ಣ ನಾನು ಅಂದಳು   .ಇನ್ನೊಬ್ಬ ತಮ್ಮ ಚಿದಾನಂದ ಶ್ರೀಕಾಂತಣ್ಣ ನಾನೂ.. ಎಂದರು.. .. ಅಕ್ಕನ ಮಗ ಆದಿತ್ಯ ಜೊತೆಯಾದ...ಅಲೆಮಾರಿಗಳು ತಂಡದ ಗಿರಿ, ಅವರ ಗೆಳೆಯ ವಿನೋದ್..  . ಪುಟ್ಟ ಮಗುವಾಗಿದ್ದಾಗಿಂದಲೂ ನೋಡಿರುವ ಪುಟ್ಟ ಪುಟ್ಟ ಮುದ್ದು ತಂಗಿ ವಿಭಾ..ಇವರೆಲ್ಲ ಜೊತೆಯಾದರು.. ಕಡೆ ಘಳಿಗೆಯಲ್ಲಿ ಜೊತೆಯಾದ ನನ್ನ ಬ್ಲಾಗ್ ಮತ್ತು ಚಾರಣದ ಗುರು ರೋಹಿತ್..

ಹನ್ನೊಂದು ಮಂದಿ ಸಾಕೆ ಅಂದಾಗ.. ಮಂಜಣ್ಣ ನಾನೂ ಇದ್ದೀನಿ ಅಂತ ಸೇರಿಕೊಂಡಿದ್ದು ಗೆಳೆಯ ಕಿರಣ್ ವಟಿ ಮತ್ತು ಚಿಕ್ಕಪ್ಪ ಚಿಕ್ಕಪ್ಪ ಎನ್ನುತ್ತಾ ಸುತ್ತಲೇ ಸುತ್ತುತ್ತಿದ್ದ ಮುದ್ದು ಮಗು "ಸಿರಿ".. ಹದಿಮೂರು ವಾಹ್.. ಸೂಪರ್ ತಂಡ ಎನಿಸಿತು..

ಸುವರ್ಣ ಸಾರಿಗೆ ಪಯಣ ಅಯ್ಯೋ ಎನಿಸಬಹುದು .. ಆದರೆ ಆ ಗೌಜು, ಗದ್ದಲಗಳ ನಡುವೆ.. ಎಲ್ಲ ಕಡೆಯಿಂದಲೂ ಸದ್ದು ಮಾಡುವ ಬಸ್, ಗಾಳಿ ಬರ್ ಎನ್ನುತ್ತಾ ನುಗ್ಗುವ ಆ ಡಬ್ಬದ ಪಯಣ ಹೇಳಿದರೆ ಸಾಲದು ಅನುಭವಿಸಬೇಕು.. 

ಮೈಸೂರು ನಿಯೋ ಹೋಟೆಲಿನಲ್ಲಿ ಹೊಟ್ಟೆಗೆ ಸೇರುವಷ್ಟು ತಿಂಡಿ ತಿಂದು.. ಹೆಜ್ಜೆ ಹಾಕಿದಾಗ ಕುಮಾರಪರ್ವತ.. ನನ್ನ ನೆಚ್ಚಿನ ಕುಮಾರಪರ್ವತ ನನ್ನ ಹತ್ತಿರಕ್ಕೆ ಬರುತ್ತಿತ್ತು.. 

ತುಂಬು ಸಂತಸದಿಂದ ಹೊರಟ ತಂಡ. .
ಚಿತ್ರಕೃಪೆ - ಸೌಮ್ಯ ವೆಂಕಿ..
ಚಿತ್ರಿಸಿದ್ದು ರೋಹಿತ್ 

ಚಾರಣದ ಆರಂಭದ ಬಾಗಿಲಿನಲ್ಲಿ ಒಂದು ಸೆಲ್ಫಿ ಹೊಡೆದು.. ಹೊರಟೆವು.. ಗಿರಿ, ರೋಹಿತ್ ಮತ್ತು ವಿನೋದ್ ಹೆಜ್ಜೆ ಹಾಕುತ್ತಾ ಎಲ್ಲರಿಗಿಂತ ಮುಂದಕ್ಕೆ ಹೋದರು.. ಅವರ ಹಿಂದೆ ವೆಂಕಿ, ಸೌಮ್ಯ, ಶಶಿ, ವಿಭಾ, ಆದಿತ್ಯ, ಚಿದು ಹಿಂಬಾಲಿಸಿದರು.. ಕುಮಾರಪರ್ವತ ನನಗೆ ಹೊಸದಲ್ಲ.. ಹಾಗಾಗಿ ಧಾರಾಳಾವಾಗಿ ಮಾತಾಡುತ್ತ ನಾನು, ರಶ್ಮಿ, ಕಿರಣ್ ಮತ್ತು ಸಿರಿ ಹೆಜ್ಜೆ ಹಾಕಿದೆವು.. ಸಮಗ್ರ ಮಾತುಗಳು ನೆಡೆಯುತ್ತಲೇ ಇತ್ತು.. ಒಂದಾದ ಮೇಲೆ ಒಂದು ವಿಷಯ.. ಅಕ್ಷಯಪಾತ್ರೆಯಾಗಿತ್ತು. 

ಮಿಕ್ಕವರು ಮುಂದಕ್ಕೆ ಹೆಜ್ಜೆ ಹಾಕಿದ್ದರಿಂದ.. ನಮಗೆ ಅಂಕೆ ಶಂಕೆ ಯಾವುದೂ ಇರಲಿಲ್ಲ.. ಹಾಯಾಗಿ ಭೀಮನಕಲ್ಲಿನ ಹತ್ತಿರ ಸಿಗುವ ಝರಿಯಲ್ಲಿ ಒಂದಷ್ಟು ಹೊತ್ತು ಕಾಲ ಕಳೆದೆವು.. ಫೋಟೋಗಳು .. ಮಾತುಗಳು ಒಂದರ್ಧ ಘಂಟೆಯನ್ನು ನುಂಗಿ ನೀರು ಕುಡಿದವು. 

ಭಟ್ಟರ ಮನೆಗೆ ಬರುವಷ್ಟರಲ್ಲಿ "ಮರಿ ಅವರೆಲ್ಲ ಊಟ ಮಾಡ್ತಾ ಇದ್ದಾರೆ.. ಬೇಗ ಊಟ ಮಾಡಿ ಫಾರೆಸ್ಟ್ ಆಫೀಸ್ ಹತ್ರ ಬಾ.. ಟಿಕೆಟ್ ತಗೊಂಡಿರ್ತೀನಿ" ಅಂದ ರೋಹಿತ್.. ಸರ ಸರ ಊಟ ಮಾಡಿ ಹೊರಟೆವು.. 

"ಎಲ್ರಿ ನಿಮ್ಮ ಬ್ಯಾಗ್ ತೋರಿಸಿ.. ಊಟ ತಿಂಡಿ ನೀರು ಬಿಟ್ಟು ಬೇರೆ ಏನೂ ತೆಗೆದುಕೊಂಡು ಹೋಗುವ ಹಾಗಿಲ್ಲ.. " ಎನ್ನುತ್ತಾ ಅರಣ್ಯ ಸಿಬ್ಬಂಧಿಗಳು ತಪಾಸಣೆ ನೆಡೆಸಿ.. ಹೆಸರುಗಳನ್ನೆಲ್ಲ ಬರೆದುಕೊಂಡು.. ತಲೆಗೆ ೩೫೦ ರೂಪಾಯಿಗಳನ್ನು ಹಾಗೂ ಸೆಕ್ಯೂರಿಟಿ ಡೆಪಾಸಿಟ್ ಅಂತ ೧೦೦೦ ರೂಪಾಯಿಗಳನ್ನು ತೆಗೆದುಕೊಂಡರು.. ಲೆಕ್ಕ ಹಾಕಿ ನೋಡಿದ್ದ ಪ್ಲಾಸ್ಟಿಕ್ ಬಾಟಲುಗಳನ್ನು ಮತ್ತು ಸಂಜೆ ಆರು ಘಂಟೆಯೊಳಗೆ ಬರದಿದ್ದರೆ ೧೦೦೦ ರೂಪಾಯಿಗಳಿಗೆ ಮೇಲುಕೋಟೆ ನಾಮವೇ ಗಟ್ಟಿ ಎಂದು ಹೇಳಿದ್ದರು.. 
ಅಲೆಮಾರಿಗಳ ಚಾರಣ 

ರೋಹಿತ್, ವಿನೋದ್ ಮತ್ತು ಗಿರಿ ದೌಡಾಯಿಸಿದರು.. ಅವರ ಹಿಂದೆ ಮಿಕ್ಕವರು. .ನಾನು ಮತ್ತು ರಶ್ಮಿ ಮೆಲ್ಲನೆ ಹೆಜ್ಜೆ ಹಾಕುತ್ತಾ.. ಒಂದು ಹಂತಕ್ಕೆ ಬಂದು.. ಮುಂದೆ ಹೋಗಲು ಇಷ್ಟವಾಗದೇ (ಅಥವಾ ತ್ರಾಣವಿಲ್ಲದೆ) ಅಲ್ಲಿಯೇ ತಣ್ಣಗೆ ಕೂತು ಮಾತಾಡುತ್ತಾ ಕುಳಿತೆವು.. ನನ್ನ ಇಷ್ಟವಾದ ಜಾಗವದು.. ಬಿಸಿಲು ಕಾಯುವಷ್ಟು ಇರಲಿಲ್ಲವಾದರೂ ಸುಡುತ್ತಿತ್ತು.. ಹಾಗೆ ಹುಲ್ಲುಗಾವಲಿನಲ್ಲಿ ತಣ್ಣಗೆ ಮಲಗಿ ಒಂದು ನಿದ್ದೆ ತೆಗೆದೆ.. ರಶ್ಮಿ ಕೂಡ ಸ್ವಲ್ಪ ಹೊತ್ತು ನಿದ್ದೆ ಮಾಡಿ.. ತನ್ನ ಬಾಯಿಗೆ ವ್ಯಾಯಾಮ ಮಾಡಿಸಲು ಚಾರಣಕ್ಕೆ ಬಂದಿದ್ದ ಒಬ್ಬರ ಹತ್ತಿರ ಮಾತಾಡುತ್ತ ಕುಳಿತಿದ್ದಳು.. 

ನನಗೆ ಎಚ್ಚರವಾದ ಮೇಲೆ ತಂದಿದ್ದ ಚಪಾತಿಯನ್ನು ಇಬ್ಬರೂ ಹೊಟ್ಟೆ ತುಂಬುವಷ್ಟು ತಿಂದೆವು..   

ಅಷ್ಟರಲ್ಲಿ ನಮ್ಮ ಒಂದು ತಂಡ ಬಂದಿತು.. ಶೇಷಪರ್ವತದ ತಪ್ಪಲಿಗೆ ಹೋಗಿ.. ವಾಪಾಸ್ ಬಂದಿದ್ದರು.. ಮಾತುಕತೆ.. ಚಪಾತಿ.. ತಂದಿದ್ದ ತಿಂಡಿ.. ಮತ್ತಷ್ಟು ಫೋಟೋಗಳು.. ನಂತರ ಮೆಲ್ಲಗೆ ನೆಡೆಯುತ್ತಾ ಭಟ್ಟರ ಮನೆ ಕಡೆ ಹೆಜ್ಜೆ ಇಟ್ಟೆವು.. 
ಒಂದು ತಂಡ.. ಸಂತಸದಲ್ಲಿ 

ವೀಕ್ಷಣಾ ತಾಣದ ಬಳಿ ಮತ್ತೆ ಒಂದಷ್ಟು ಮಾತುಕತೆ.. ವಿನೋದ್, ರೋಹಿತ್ ಮತ್ತು ಗಿರಿ ಸುಳಿವಿರಲಿಲ್ಲ.. ಕತ್ತಲಾಗುತ್ತೆ ಅಂತ.. ನಾವೆಲ್ಲರೂ ಅರಣ್ಯ ಇಲಾಖೆ ಹತ್ತಿರ ಬಂದೆವು.. ಅಲ್ಲಿಯೂ ಕಾದರೂ ಉಪಯೋಗವಿಲ್ಲ.. ಅಲ್ಲಿದ್ದ ಸಿಬ್ಬಂದಿಗಳು ನಿಮ್ಮ ಬ್ಯಾಗ್ ತಗೊಂಡು ಹೊರಡಿ ಬಂದವರನ್ನು ನಾವು ಕಳಿಸುತ್ತೇವೆ.. ಎಂದು ನಮ್ಮನ್ನು ಸಾಗು ಹಾಕಿದರು.. 

ಕತ್ತಲಾಗಿತ್ತು .. ಭಟ್ಟರ ಮನೆ ಅಕ್ಷರಶಃ ಸಂತೆಯಾಗಿತ್ತು.. ಏನಿಲ್ಲವೆಂದರೂ ೩೦೦ ಮಂದಿಗೂ ಹೆಚ್ಚು.. ಆದರೆ ಅಲ್ಲಿ ಕಂಡ ಶಿಸ್ತು ಇಷ್ಟವಾಯಿತು.. ತಟ್ಟೆ ತೊಳೆದುಕೊಂಡು ಬರೋಕೆ ಸರತಿ ಸಾಲು,ಅನ್ನ ಸಾರು ಹಾಕಿಕೊಳ್ಳೋಕೆ ಸರತಿ ಸಾಲು.. ಮತ್ತೆ ತಟ್ಟೆ ತೊಳೆಯೋಕೆ ಸಾಲು.. ಇಷ್ಟವಾಯಿತು.. ಸರ್ ನಿಮ್ಮ ಊಟ ಆಯ್ತಾ.. ಆಗಿದ್ದರೆ ತಟ್ಟೆ ಕೊಡಿ ಸರ್.. ಅಂತ ಕೇಳುವವರು ಒಬ್ಬರಾದರೆ ..ಊಟ ಮುಗಿಯುವ  ಲಕ್ಷಣ ಕಂಡ ಕೂಡಲೇ.. ನಮ್ಮ ಹಿಂದೆ ಮುಂದೆ ಸುತ್ತಿ.. ತಟ್ಟೆ ತೊಳೆದಮೇಲೆ ನಮ್ಮ ಕೈಯಿಂದ ಅದನ್ನು ತೆಗೆದುಕೊಂಡು ಹೋಗುವವರು ಒಬ್ಬರಾದರೆ.. ಕೊಡಿ ಸರ್ ನಾನೇ ತೊಳೆದುಕೊಳ್ಳುತ್ತೇನೆ ಎನ್ನುವವರು ಇದ್ದರು.. ಇಬ್ಬರೂ ಮೂವರು ಒಂದೇ ತಟ್ಟೆಯಲ್ಲಿಯೇ ಊಟ ಮಾಡುತ್ತಿದ್ದದ್ದು ಕಂಡು ಬಂದಿತ್ತು.. ಹೊಟ್ಟೆ ಹಸಿವು ಮನುಜನನ್ನ ರಾಕ್ಷಸನ್ನಾಗಿ ಮಾಡುವುದು ನೋಡಿದ್ದೇ.. ಆದರೆ ಇಲ್ಲಿ ಮಾನವೀಯತೆಯೂ ಕಾಣುತ್ತಿತ್ತು... 

ಇಷ್ಟೆಲ್ಲಾ ಆಗುವ ಹೊತ್ತಿಗೆ ರೋಹಿತ್, ಗಿರಿ ಮತ್ತು ವಿನೋದ್ ಬಂದರು.. ಕುಮಾರಪರ್ವತದ ತುತ್ತ ತುದಿಯನ್ನು ತಲುಪಿದ ಖುಷಿ ಮತ್ತು ತೃಪ್ತಿ ಅವರ ಮೊಗದಲ್ಲಿ ಕಾಣುತ್ತಿತ್ತು.. !

ಶಿಖರವೇರಿದ ಸಂತಸದಲ್ಲಿ ತ್ರಿಮೂರ್ತಿಗಳು 



ಮರಿ ಗಿರಿ ವಿನೋದ 
ವಿಭಾ,ರಶ್ಮಿ, ಸೌಮ್ಯ ಮತ್ತು ಸೌಮ್ಯ ಅವರ ಪತಿರಾಯ ವೆಂಕಿಯನ್ನು ಒಂದು ಟೆಂಟ್ ಒಳಗೆ ಮಲಗೋಕೆ ಹೇಳಿದೆವು.. ಆದಿತ್ಯ, ರೋಹಿತ್ ಮತ್ತು ಗಿರಿ ಇನ್ನೊಂದು ಟೆಂಟ್.. ವಿನೋದ್, ನಾನು, ಚಿದು ಮತ್ತು ಶಶಿ ಮಲಗುವಚೀಲದೊಳಗೆ ಜಾರಿಕೊಂಡು ಮುಂದಿನ ದಿನಕ್ಕೆ ಅಣಿಯಾಗಲು ಮಲಗಿದೆವು.. 
ಉಳಿದಿದ್ದು ಇಲ್ಲಿ ಶ್ರೀ 


ಬೆಳಗಾದಾಗ 


ಶ್ರೀ ಇಲ್ಲಿ ಕೂಕ್ ಎಂದ ಮರಿ 
ಬೆಳಿಗ್ಗೆ ತುಸು ಬೇಗ ಎದ್ದು.. ನಾನು ಒಂದು ಪುಟ್ಟ ವಾಕಿಂಗ್ ಹೋಗಿದ್ದೆ.. ಒಂದಷ್ಟು ಫೋಟೋ ಸಿಕ್ಕಿದವು.. ಒಬ್ಬೊಬ್ಬರೇ ನಿತ್ಯ ಕರ್ಮಗಳನ್ನು ಮುಗಿಸಿ.. ತಿಂಡಿ ತಿಂದು.. ಟೆಂಟ್ ಮಡಿಸಿ.. ಭಟ್ಟರಿಗೆ ನಮಸ್ಕಾರ ತಿಳಿಸಿ ಕುಕ್ಕೆಗೆ ಇಳಿಯೋಕೆ ಶುರುಮಾಡಿದೆವು.. 
ಚಾರಣದ ತಂಡ ಅನ್ನದಾತರ ಜೊತೆಯಲ್ಲಿ 

ಗಿರಿ ತುರ್ತು ಪರಿಸ್ಥಿತಿ ಇದ್ದದರಿಂದ ಬೇಗ ಬೇಗ ಇಳಿದು ಹೋದ.. ಅವನ ಹಿಂದೆ ವಿನೋದ್ ಇಳಿದು ಹೋದರು.. ಮಿಕ್ಕವರು ತಮ್ಮ ತಮ್ಮ ಸಮಯ ತೆಗೆದುಕೊಂಡು ಕೆಳಗೆ ಇಳಿದಾಗ ಉಸ್ಸಪ್ಪ ಎನ್ನುವ ನಿಟ್ಟುಸಿರು ಒಂದು ಕಡೆ.. ಇನ್ನೊಂದು ಕಡೆ ಅಮೋಘ ಸಮಯ ಕಳೆದ ಖುಷಿ.. 

ಸ್ನಾನಾದಿಗಳಿಗೋಸ್ಕರ ಒಂದು ಪುಟ್ಟ ಮನೆಯನ್ನು ಬಾಡಿಗೆಗೆ ತೆಗೆದುಕೊಂಡು..ಸರ ಸರ ಎಲ್ಲರೂ ಸಿದ್ಧವಾದರು.. ಅಷ್ಟರಲ್ಲಿ ಕಿರಣ್ ಮತ್ತು ಸಿರಿ ಜೊತೆಯಾದರು... ಒಂದು ಅರ್ಧ ಘಂಟೆ.. ದೇವಸ್ಥಾನದ ಬಾಗಿಲಲ್ಲಿ ಇದ್ದೆವು.. 

ಸುಬ್ರಮಣ್ಯ ಸ್ವಾಮಿಯ ಮತ್ತು ಆದಿ ಸುಬ್ರಮಣ್ಯ ಸ್ವಾಮಿಯ ದರ್ಶನ.. ಹೋಟೆಲಿನಲ್ಲಿ ಕಾಫಿ, ಬೋಂಡಾ, ಮಸಾಲೆ ಪುರಿ.. ಗಡ್ ಬಡ್ ಐಸ್ಕ್ರೀಮ್.. ದೇವಸ್ಥಾನದ ಊಟ. ಆಹಾ.. ಭಾನುವಾರ ಸಂಜೆ ಸಕತ್ತಾಗಿಯೇ ಕಳೆಯಿತು.. 
ನಾವು ಒಂದು.ಒಂದು . ಹನ್ನೊಂದು 
ಬಸ್ ನಿಲ್ದಾಣಕ್ಕೆ ಹೊರಡುವಾಗ ಕಿರಣ್ ಮತ್ತು ಸಿರಿಗೆ ಬೈ ಹೇಳಿ.. ಬಸ್ಸಿನಲ್ಲಿ ಕೂತಾಗ ಸುಂದರವಾದ ೪೮ ಘಂಟೆಗಳನ್ನು ಕಳೆದ ಸಂತೃಪಿ ಎಲ್ಲರ ಮೊಗದಲ್ಲಿ.. !!!

****

"ಕೆಪಿ ತಮಾಷೆ ಗೊತ್ತಾ .. ಅಲೆಮಾರಿಗಳ, ಚಡ್ಡಿ ದೋಸ್ತುಗಳ,  ಮತ್ತು ಮಮಕಾರ ಹೊತ್ತ ಅಣ್ಣ ತಂಗಿ ತಮ್ಮಂದಿರ ಮತ್ತು ಬಂಧಗಳ ಸೊಗಸಾದ ಸಂಗಮವಾಗಿತ್ತು ಕಣೋ ... "



ಬೆಂದು ಪಕ್ವವಾದಗಲೇ  ಚಾರಣ ಸುಖ ಅನ್ನಿಸೋದು 


"ಹೌದು ಶ್ರೀ .. ಇದೊಂತರಹ ಮಜಾ ಇತ್ತು... ಸ್ಫೂರ್ತಿ ಇದ್ದ ಕೆಲವರು.. ದೈಹಿಕ ಶಕ್ತಿ ಇದ್ದ ಕೆಲವರು... ಮನೋಧೈರ್ಯ ಇದ್ದವರು ಕೆಲವರು.. ಕಲ್ಲು ಬಂಡೆಯನ್ನು ಅಲುಗಾಡಿಸುವ ಮಾತಿನ ಛಾತಿ ಇದ್ದವರು.. .ತಣ್ಣಗೆ ಇದ್ದುಕೊಂಡೇ ಧಮ್ ಎನ್ನಿಸುವ ಒನ್ ಲೈನರ್ ಹೇಳುವ, ಎಲ್ಲರೂ ಅಪವಾದ ಹೇರಿದರೂ ನಗು ನಗುತ್ತಾ ಹೆಜ್ಜೆ ಹಾಕುವ.. ಪತಿಯೊಡನಿದ್ದರೆ ನಾನು ಒಬ್ಬ ಸಿಪಾಯಿ ಎನ್ನುವವರು ಹೀಗೆ ಒಂದು ಅದ್ಭುತ ಸದಸ್ಯರ ತಂಡವಾಗಿತ್ತು.. ಆದರೂ... "

ಸೂರ್ಯ ಅಸ್ತಮಿಸುತ್ತಿಲ್ಲ.. ಬದಲಿಗೆ ನಾ ಮತ್ತೆ ಬರುತ್ತೀನಿ ಎನ್ನುತ್ತಿದ್ದಾನೆ 
"ಏನಪ್ಪಾ ಆದರೂ.. ಗೊತ್ತು ಬಿಡು.. ನಾನು ಶಿಖರ ತಲುಪಬೇಕಿತ್ತು ಅಂತ ತಾನೇ.. ಆಗಲೇ ಹೇಳಿದ್ದೆನಲ್ಲ.. ನಾನು ಮಾನಸಿಕವಾಗಿ ಸಿದ್ಧವಾಗಿ ಬಂದಿದ್ದೆ.. ಎಲ್ಲಿ ತನಕ ಆಗತ್ತೋ ಅಲ್ಲಿ ತನಕ ಅಂತ.. ಸಾಕು ಎನಿಸಿತು.. ಜೊತೆಯಲ್ಲಿ ತಂಗಿಯನ್ನು ಒಬ್ಬಳೇ ಬಿಟ್ಟು ಬರುವುದು ಹೇಗೆ.. ಅವಳೇನೋ ಕಲ್ಲನ್ನು ಮಾತಾಡಿಸಿ ಬರುತ್ತಾಳೆ.. ಆದರೆ ನನ್ನ ಜೊತೆ ಕಳಿಸಿದ ಮೇಲೆ.. ನನ್ನ ಜವಾಬ್ಧಾರಿ ಅಲ್ಲವೇ.. 
ಎಲ್ಲರೂ ಕುಮಾರಪರ್ವತದ ತುತ್ತ ತುದಿ ತಲುಪಿದ್ದರೇ ಸೊಗಸಾಗಿತ್ತು.. ಇರಲಿ ಬಿಡು..  ಮತ್ತೊಮ್ಮೆ ನಿನ್ನ ಮಡಿಲಿಗೆ ಬರುತ್ತೇನೆ.. "
ನಿನಗಾಗಿ ಹೀಗೆ ಕಾಯುತ್ತಿರುವೆ ಎಂದ ಕೆಪಿ.. !!!

"ಶ್ರೀ ನಾನೂ ನಿನಗೆ ಕಾಯುತ್ತೇನೆ.. ಇನ್ನೊಂದು ಸುಂದರ ತಂಡವನ್ನು ಎದುರು ನೋಡುತ್ತಾ.. "

"ಬೈ ಕೆಪಿ ಸಿಗೋಣ ಮತ್ತೆ ಅಕ್ಟೋಬರ್ ಮಾಸದಲ್ಲಿ.. "

ಮೈಕೈ ತೊಳೆದು ಸಜ್ಜಾಗಲು ನಿಂತ ಕೆಪಿ 

ಕೆಪಿ ಒಮ್ಮೆ ಹಲ್ಲು ಬಿಟ್ಟು ಆಕಳಿಸಿತು. ತನ್ನ ಮೈಯಲ್ಲಿ ಪ್ಲಾಸ್ಟಿಕ್ ಕಸಗಳು ಕಡಿಮೆಯಾದ ಖುಷಿಯಲ್ಲಿ.. ಮಳೆಗಾಲದ  ಕಾಲವನ್ನು ಎದುರು ನೋಡುತ್ತಾ ಮತ್ತೆ ಮೈತೊಳೆದುಕೊಂಡು ಮತ್ತೆ ಹಸಿರಾಗಲು ಕೆಪಿ ಕಾಯುತ್ತಿತ್ತು.. ಆ ಹಸಿರಾದ ನೆನಪನ್ನು ಹೊತ್ತು ನಾವು ಮಾಯಾನಗರಿಯ ಕಡೆಗೆ ಪಯಣ ಬೆಳೆಸಿದೆವು.. ಮತ್ತೊಮ್ಮೆ ಅಕ್ಟೋಬರ್.. ಮತ್ತೊಮ್ಮೆ ಕೆಪಿ.. !!!

Tuesday, January 15, 2019

Alemaarigalu on cloud bed!!!

What to do and what not to do..!

My energy point trek to KP aka kumara parvatha pushed to last week of January 2019, so somehow i wanted to flex my legs which was put to rest from Nov 2017 my last trek to KP.  Even though 2018 March saw alemaarigalu team trekked Shivagange, after that i cooled my heals for more than 9 months, and yes it is time to deliver :-)

My trusted Lieutenant Sandeep was occupied, Latesh was out of town, then came Giri, he too was not free..but wanted some outing..so I zeroed on Skandagiri...

Its like it was in my list from quite a long time, and it was crying for my attention..Giri also tried many times, but was on the other side of success.. 

Finally it was destined to be decided on Jan 11th.  Few messages, few tele calls  and one telepathy...pulled a team of eleven soldiers ready to peak skandagiri. 

It was Giri, Chinmay, Kishor and Sri...hold hold hold...followed by all gals gang...Rashmi 1, Rashmi 2, Lakshmi, Damini, Manjula, Jamuna, and Sheethal.. !!!


It was a fabulous journey from Bangalore to Skandagiri. We started from Electronics city at 12.45 in the midnight.. It was song and dance till we reached Skanda Giri Base. 

It was wee hours on Sunday chilled morning.. Our bones were crying for attention.  Already there were 100's of enthusiastic trekkers piled up near the ticket counter.  Unfortunately tickets were sold out...what am not talking about KGF or Petta Movie...yes tickets were off for the day.. but asked us to book online referring to a website.  In next few minutes chinmay screamed...got it...and we were on the path to the peak!!!


It is nice to walk in the pitch dark, with torches on.. and if we talk someone either from  front or behind will answer your questions...it will be fun :-) :-) :-)

only 100-200 mtrs everyone with mufler, caps, jackets were looking like Eskimos..then they started putting caps, jackets, mufler in to the bag..and enjoying the chilled weather. 

As usual I was treading the path in my usual pace, Chinmay marshaling Kishor and Rashmi. There were enthusiastic and energetic legs in Giri, Rashmi Hegde, Lakshmi,  Jamuna, Sheethal, Manjula, Damini they rushed to the peak in no time!

Ravi/Sun/Dinakar/Bhaskar in whatever name you call, he staged a perfect play over there!

First he announced to the world that, he is coming on time, by painting the sky with his favorite mixture of red/orange... !


He switched on his torch showing us the white patch of blanket on the landscape...every one on their heels by seeing the first scene of the play!


Then the scene started.. he put one blanket on another..so it was extreme thick white blanket all around!


We started screaming as we do in the entry scene of our demigods on the silver screen!  It was awesome landscape.. Sun showing is face up..brightening the whole landscape, thick cloud bed..waaah amazing!


We burned enough space in the memory card via selfies, DSLR, SLR and of course our beautiful eyes.  You can not say ok, enough, let me go!!!   We turned like kids, one ice cream...and we used to scream for another!!!





It was a fantastic day, amazing team who supported each other.  Few talks, few jokes we all became a feathers of same bird.

For information : 

  • Skandagiri trek open up at 4.00 hrs in the morning.
  • Better to book online 
  • Night trekking is banned, so dont try to do that
  • Nothing is available at the top nor on the way, carry enough water, eatables, fruits
  • Trek is about 4-5kms, it is easy in the beginning, moderate in the middle, and you will be gasping for breath in the last leg, but dont get disheartened once you reach the peak you will get an amazing view
  • The trek is open 365 days, I would recommend to trek only between October to January, as you can see ocean of clouds under your feet.  
  • Make it to the peak before sunrise, and enjoy, and trek back to reach the base by 9.00, so you will be at your dining table for lunch!
  • There are plenty of places of interest near by Sir M Vishweshawaraiah birth place turned in to museum, Bhoga Nandeeshwara temple, Devanahalli Fort, and if you have enough wheels on your legs Nandi Hills also at stone throw away distance. 
  • The entry fee is Rs. 250.00 Per head, even  though it appears pricey, but keeping the trek place intact some restrictions are required otherwise it becomes garbage yard!  

We spent amazing sunday on one of the best landscapes around Bangalore for a one day outing.  Yes, stamina is required to do the trek, but it is not mandatory...Always will power over rules the stamina..!

Keep the will to visit Ocean of clouds underneath!

Have a great time and keep the environment clean!

Monday, January 14, 2019

ಸ್ಕಂದಗಿರಿಯಲ್ಲಿ ಅಲೆಮಾರಿಗಳು !!!

 ಆಸೆ ಪಟ್ಟರೆ ಸಾಕೆ.. ಅದರ ಬೆನ್ನು ಬಿದ್ದು ಸಾಧಿಸಬೇಕು.. !!!

೨೦೦೫ ರಲ್ಲಿ . ಜಿಇ ಕಂಪನಿಯಲ್ಲಿ ಕೆಲಸಮಾಡುವಾಗ .. ಆಫೀಸ್ ಮೇಲ್ ಗೆ ಒಂದು ಪೋಸ್ಟ್ ಬಂತು.. ಹಾಲಿನ ನೊರೆಯಲ್ಲಿ ಸುತ್ತ ಮುತ್ತಲ ಗುಡ್ಡಗಳು ಮುಳುಗೇಳುತ್ತಿದ್ದವು.. ಆ ಚಿತ್ರಗಳನ್ನ ಕಂಡಾಗ ಸಹಜವಾಗಿಯೇ ಕುತೂಹಲ ಮೂಡಿತು... ಎಲ್ಲಿದೆ ಆ ಜಾಗ ಎಂದು ತಡಕಾಡಿದಾಗ ಸಿಕ್ಕಿದ ಉತ್ತರ ಬೆಂಗಳೂರಿಂದ ಕೇವಲ ೭೦-೮೦ ಕಿಮೀಗಳ ದೂರ ಎಂದು ಗೊತ್ತಾಯಿತು..

ಅರೆ ಇಸ್ಕಿ.. ಹೋಗಿಯೇ ಬಿಡೋಣಾ ಅಂತ.. ಅವತ್ತಿಂದ ಪ್ಲಾನ್ ಮಾಡಿದ್ದೆ ಮಾಡಿದ್ದು.. ಫಲಕಾರಿಯಾಗಿರಲಿಲ್ಲ.. ನನ್ನದೇ ಗುಂಪು ಅಲೆಮಾರಿಗಳು ತಂಡವನ್ನು ಕಟ್ಟಿಕೊಂಡಮೇಲೂ ಸಾವಿರಾರು ಕಿಮೀಗಳು..ಸುತ್ತಿದೆವು.. ಹತ್ತಾರು ಜಾಗಗಳಲ್ಲಿ ಅಲೆಮಾರಿಗಳ ಹೆಜ್ಜೆ ಗುರುತು ಮೂಡಿಸಿದ್ದೆವು.. ಆದರೆ ಕೇವಲ ೭೦-೮೦ ಕಿಮಿದೂರದಲ್ಲಿರುವ ಸ್ಕಂದಗಿರಿಗೆ ಮಾತ್ರ ಹೆಜ್ಜೆ ಇಡೋಕೆ ಆಗಿರಲಿಲ್ಲ.. ಅದರ ಸುತ್ತ ಮುತ್ತಲ ನಂದಿ ಬೆಟ್ಟ, ಚನ್ನಗಿರಿ, ಮಾಕಳಿದುರ್ಗ ನೋಡಿ ಬಂದಿದ್ದೆವು ಆದರೆ ಸ್ಕಂದ ಗಿರಿ ಕರೆಯುತ್ತಲೇ ಇತ್ತು..

ಆ ದಿನ ಬಂದೆ ಬಿಡ್ತು.. ಮಲೆನಾಡಿನ ಹುಡುಗ ಗಿರಿ ಪದೇ ಪದೇ ಶ್ರೀ ಎಲ್ಲಾದರೂ ಹೋಗೋಣ ಎನ್ನುವ ನಿರಂತರ ಬೇಡಿಕೆ.. ಸ್ಕಂದಗಿರಿಯ ತಪ್ಪಲಿಗೆ ಕರೆದೊಯ್ಯಲು ಸಿದ್ಧವಾಗಿತ್ತು..  ಒಂದು ಪ್ರವಾಸಕ್ಕೆ ಹೇಗೆ ಎಲ್ಲವೂ ಒದಗಿ ಬಂದು ಹೂವಿನ ಸರವಾಗುತ್ತೆ ಎನ್ನುವುದಕ್ಕೆ ಉದಾಹರಣೆ ಈ ಚಾರಣ..

ಗಿರಿ ಮತ್ತು ನಾನು ಸಿದ್ಧವಾದೆವು.. ರಶ್ಮಿ ಬರ್ತೀನಿ ಅಂತ ಹೇಳಿದ್ಲು.. ಅವಳಿಗೆ ಹೇಳಿದ ಮೇಲೆ.. ಅವಳಿಂದ ಚಿನ್ಮಯ್, ಲಕ್ಷ್ಮಿಪ್ರಿಯ, ಜಮುನಾ, ದಾಮಿನಿ, ಮಂಜುಳಾ ಜೊತೆಯಾದರು.. ನಂತರ ಕಿಶೋರ್ ಬರುವೆ ಎಂದು ಒಪ್ಪಿದರು.. ಇನ್ನೊಬ್ಬಳು ರಶ್ಮಿ ಹೆಗಡೆ ಸಂಜೆ ಸುಮಾರಿಗೆ ಒಪ್ಪಿದಳು.. ಜೊತೆಯಲ್ಲಿ ನನ್ನ ಗೆಳತೀ ಶೀತಲ್.. ಸರಿಯಾಗಿ ಹನ್ನೊಂದು ಮಂದಿ.. ಅದರಲ್ಲಿ ಹೆಣ್ ಮಕ್ಕಳದೇ ಸೈನ್ಯ.. ಏಳು ಮಂದಿ.. ಯಪ್ಪೋ.
ಚಿತ್ರಕೃಪೆ -  ಚಿನ್ಮಯ್ 
ರಾತ್ರಿ ೧೨. ೪೫ಕ್ಕೆ ಹೊರಟ ನಮ್ಮ ವಾಹನ ಎಲ್ಲರನ್ನು ಅವರವರ ಮನೆ ಬಾಗಿಲಿನಿಂದ ಹತ್ತಿಸಿಕೊಂಡು ಬಳ್ಳಾರಿ ರಸ್ತೆಯಲ್ಲಿ ಮುನ್ನುಗುತ್ತಾ ಸಾಗಿ ಸ್ಕಂದಗಿರಿ ತಪ್ಪಲಿಗೆ ಬಂದದ್ದು ಬೆಳಗಿನ ಜಾವ ೪.೧೫ಕ್ಕೆ.. ಅಲ್ಲೊಂದು ಸಂತೆಯೇ ನೆರೆದಿತ್ತು..ನೂರಾರು ಮಂದಿ ಚಾರಣಿಗರು ಬೆಳಗಿನ ಆ ಹಾಲುನೊರೆಯಲ್ಲಿ ಮುಳುಗೇಳುವ ಬೆಟ್ಟಗಳ ಸಾಲನ್ನು ನೋಡಲು ಕಾತುರತೆಯಿಂದ ಟಿಕೆಟ್ ಖರೀದಿಸಲು ನೆರೆದಿದ್ದರು.. ನಮಗೆ ಒಂದು ಶಾಕ್ ಕಾದಿತ್ತು.. ಟಿಕೆಟ್ ಮುಗಿದುಹೋಗಿದೆ.. ಆನ್ಲೈನ್ ಬುಕ್ ಮಾಡಿ ಅಂತ ಅಲ್ಲಿದ್ದ ಸಿಬ್ಬಂದಿ  ಹೇಳಿದರು.. ತಕ್ಷಣ ಎಲ್ಲರ  ಮೊಬೈಲ್ ನೆಟ್ ಆನ್ ಆಯಿತು.. ಆದರೆ ಅಲ್ಲಿಯೂ ನಿರಾಸೆ.. ಅಂದಿನ ದಿನದ ಟಿಕೆಟ್ ಕೋಟಾ ಮುಗಿದುಹೋಗಿತ್ತು ಅಂತ ಮೊಬೈಲ್ ಹೇಳಿತು..

ಎಲ್ಲರಿಗೂ ನಿರಾಸೆ.. ಆ ನಿರಾಸೆ ಹೊತ್ತ ಮುಖಗಳಲ್ಲಿ ಬಂದ ನಿಟ್ಟುಸಿರು.. ಮತ್ತು ಆ ಬೇಸರದ ಛಾಯೆ ಆ ಕತ್ತಲಿನಲ್ಲಿಯೂ ಕಾಣಿಸುವಷ್ಟು ಸ್ಪಷ್ಟವಾಗಿತ್ತು.. ನಮ್ಮ ಆರ್ಮಿ ಮ್ಯಾನ್ ಚಿನ್ಮಯ್ "ಶ್ರೀಕಾಂತಣ್ಣ ಒಳಗೆ ಹೋಗಿ ಮಾತಾಡಿಕೊಂಡು ಬರ್ತೀನಿ" ಅಂತ.. ಹೋಗಿ ಮಾತಾಡಿಕೊಂಡು ಬಂದು.. ತಕ್ಷಣವೇ ಮೊಬೈಲ್ನಲ್ಲಿ ಬುಕ್ ಮಾಡಿ.. ಟಿಕೆಟ್ ಸಿಕ್ಕ ಸಂದೇಶ ನೋಡಿದಾಗ ಎಲ್ಲರ ಮೊಗವೂ..  "ಅರಳಿದೆ ಅರಳಿದೆ ಮುದುಡಿದ ತಾವರೆ ಅರಳಿದೆ" ಹಾಡಿನಂತೆ ಅರಳಿತ್ತು..

ಇದಕ್ಕೂ ಮೊದಲು.. ಟೆಂಪೋ ಟ್ರಾವೆಲ್ಲರ್ ನಲ್ಲಿ ಎಲ್ಲರೂ ಹತ್ತಿದ ಮೇಲೆ.. ನನಗೆ ಎಲ್ಲರೂ ಪರಿಚಯ.. ಆದರೆ ಕಿಶೋರ್ ಮತ್ತು ಗಿರಿಗೆ ಎಲ್ಲರೂ ಹೊಸಬರು.. ಲಾಡು ಬಾಯಿಗೆ ಬಿತ್ತಾ ಎನ್ನುವ ಸಂಧರ್ಭವೇ ಒದಗಿರಲಿಲ್ಲ.. ಐಸ್ ಬ್ರೇಕಿಂಗ್ ಸೆಶನ್ ನೆಡೆದರೂ  ಒಬ್ಬರಿಗೊಬ್ಬರ ಮಧ್ಯೆ ಆ ಮಟ್ಟದ ಮಾತುಗಳು ನೆಡೆಯೋಕೆ ಅವಕಾಶ ಆಗಿರಲಿಲ್ಲ.. ನನಗೆ ಗೊತ್ತಿತ್ತು.. ಚಾರಣ ಶುರುವಾದ ಮೇಲೆ.. ನನ್ನ ಮಧ್ಯಸ್ಥಿಕೆ ಬೇಕಾಗೋಲ್ಲ.. .ಅವರೆಲ್ಲರೂ ನನ್ನ ಮರೆತು ಒಂದಾಗಿ ಮುನ್ನೆಡೆಯುತ್ತಾರೆ ಎಂದು..

ಬೆಟ್ಟ ಹತ್ತಲು ಶುರುಮಾಡಿದಾಗ.. ಒಬ್ಬರಿಗೊಬ್ಬರು ಮಾತು, ಒಬ್ಬರಿಗೊಬ್ಬರು ಆ ಕತ್ತಲೆಯಲ್ಲಿ ಕೈ ಹಿಡಿದು ಸಹಾಯ ಮಾಡುತ್ತಾ ಹಾಸ್ಯ ಮಾಡುತ್ತಾ ಎಡಬಿಡದೆ ಮಾತಾಡುತ್ತಾ ಹೆಜ್ಜೆ ಹಾಕುತ್ತಾ ಹೋದ ಹಾಗೆ ನಡುವೆ ಇದ್ದ ಕಾಣದೆ ಇದ್ದ ಗೋಡೆ ನಿಧಾನವಾಗಿ ಕರಗಿ ಹೋಯಿತು.. ಎಲ್ಲರಿಗೂ ಕಾಮನ್ ಕೊಂಡಿಯಾಗಿದ್ದ ನಾನು ನಿಟ್ಟುಸಿರು ಬಿಟ್ಟು.. ನನ್ನ ಪಾಡಿಗೆ ನನ್ನ  ಕ್ಯಾಮೆರಾಗೆ ಕೆಲಸ ಕೊಡುತ್ತಾ ಹೋದೆ..  ನಾ ನಿರಾಳ ಆಗಿದ್ದೆ.. ಎಲ್ಲರೂ ಒಂದಾಗಿದ್ದು ನನಗೆ ಖುಷಿ ಕೊಟ್ಟಿತ್ತು.. !!!

ಆ ಮಬ್ಬುಗತ್ತಲಿನಲ್ಲಿ ನಿಧಾನವಾಗಿ ಬೆಟ್ಟವೇರತೊಡಗಿದೆವು... ಗುಂಪು ಮೂರು ಭಾಗವಾಗಿತ್ತು.. ಸ್ವಲ್ಪ ಸಲೀಸಾಗಿ ಹೆಜ್ಜೆ ಹಾಕುತ್ತಾ ಸಾಗುವ ಗುಂಪಿಗೆ ಗಿರಿ ಮುಂದಾಳಾಗಿ ಮಂಜುಳಾ, ದಾಮಿನಿ, ರಶ್ಮಿ ಹೆಗಡೆ, ಲಕ್ಷ್ಮಿಪ್ರಿಯ, ಜಮುನಾ ಜೊತೆಯಲ್ಲಿ ಶೀತಲ್ ಮುನ್ನೆಡೆಸಿದರು .. ಕಿಶೋರ್, ರಶ್ಮಿ ಜಿ ಇವರಿಬ್ಬರನ್ನು ತಾಳ್ಮೆಯ ಚಿನ್ಮಯ್ ಮುನ್ನೆಡೆಸುತ್ತಾ ಹೋದರು.. ಈ ಎರಡು ಗುಂಪುಗಳ ಮಧ್ಯೆ ನಾನು ಸಾಗುತ್ತಾ ಹೋದೆ..



ದಿನಕರನ ತಾಯಿ.. "ಮಗು ಸೂರ್ಯ.. ಬೆಳಿಗ್ಗೆ ನಮ್ಮ ಕೊಟ್ಟಿಗೆಯಲ್ಲಿ ಕಟ್ಟಿದ್ದ ಹಸುಗಳಲ್ಲಿ ಹಾಲು ಕರೆದು ಹಂಡೆಗಳಲ್ಲಿ ತುಂಬಿಸಿಟ್ಟಿದ್ದೀನಿ.. ಒಲೆ ಹೆಚ್ಚು . ಹಾಲು ಕಾಯಬೇಕು.. " ಎಂದು ಹೇಳಿದ್ದನ್ನು ಕೇಳಿ.. ಬಾಲಕ ದಿನಕರ ಒಲೆ ಹಚ್ಚಿದ ಮೇಲೆ  ಹಂಡೆಗಳು  ಬಿಸಿಯಾಗುತ್ತಿತ್ತು.. ಅದನ್ನು ನೋಡಿ ಖುಷಿ ಪಟ್ಟ.. ತುಂಟ ಹುಡುಗನ ಮನಸ್ಸು ಆಟದ ಕಡೆಗೆ ವಾಲಿತು.. ಆದರೆ ಆಟವಾಡಲು ಸುಮಾರು ಮೆಟ್ಟಿಲು ಮೇಲೆ ಹತ್ತಿ ಬರಬೇಕಿತ್ತು..ಹಾಲು ಕಾಯುವ ಹೊತ್ತಿಗೆ ಒಂದಷ್ಟು ಆಟವಾಡಿ ಬರೋಣ ಎಂದು ಒಂದೊಂದೇ ಮೆಟ್ಟಿಲು ಹತ್ತುವಾಗೂ.. ಹಂಡೆಗಳು ಕಾದು ಕಾದು ಕೆಂಪಾಗುತ್ತಿತ್ತು.. ಆಟದ ಮಧ್ಯೆ ಹಾಲಿನ ಕಡೆಗೆ ಗಮನವನ್ನೇ ನೀಡದ ತುಂಟ ಆಡುತ್ತಲೇ ಹೋದ.. ಹಂಡೆಗಳು ಕೆಂಪಾಗಿ.. ಹಾಲು ಕುದ್ದು ಕುದ್ದು ಉಕ್ಕಲು ಶುರುಮಾಡಿತು.. ಉಕ್ಕಿ ಉಕ್ಕಿ ಎಲ್ಲೆಡೆಯೂ ಹರಿಯತೊಡಗಿತು.. ತನ್ನ ಬುಡಕ್ಕೂ ಬಿಸಿ ಬಿಸಿ ಹಾಲು ತಾಕಿದಾಗ ಆಟದ ಗಮನ ಬಿಟ್ಟು.. ಅಯ್ಯೋ.. ಅಮ್ಮ ನನ್ನ ನೋಡಿದರೆ ಚೆನ್ನಾಗಿ ಬಾರಿಸುವಳು ಎನ್ನುತ್ತಾ ಅವಳ ಕೈಗೆ ಸಿಗಬಾರದು ಎಂದು  ಹಂತ ಹಂತವಾಗಿ ಮೇಲೇರತೊಡಗಿದ.. ಅವನು ಏರುತ್ತಾ ಹೋದ ಹಾಗೆ ಹಾಲಿನ ನೊರೆಗಳು ದಿನಕರನನ್ನು ಹಿಡಿಯಲು ಅವನನ್ನೇ ಹಿಂಬಾಲಿಸಿದವು.. ಆದರೆ ದಿನಕರನು ಪುಟ್ಟ ಪುಟ್ಟದಾಗಿದ್ದ ಆದ್ದರಿಂದ ವೇಗ ಹೆಚ್ಚು ಮಾಡುತ್ತಾ ಹೋದ.. ಸೋತ ಹಾಲಿನ ನೊರೆಗಳು.. ಹಾಗೆಯೇ ಸಿಕ್ಕ ಕಡೆಯೆಲ್ಲಾ ಹರಡಿಕೊಳ್ಳತೊಡಗಿದವು.. ಅಡಿಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದ ದಿನಕರನ ತಾಯಿಗೆ ಏನೋ ಅನುಮಾನ ಬಂದು.. ಒಲೆಯ ಹತ್ತಿರ ಬಂದು ನೋಡಿದರೆ.. ಹಾಲಿನ ನೊರೆಯ ಸಾಗರವೇ ಇತ್ತು.. ಅಚ್ಚರಿ ಎಂದರೆ.. ಒಲೆ ಮಾತ್ರ ಆರಿರಲಿಲ್ಲ.. ಅದೇ ವಿಶೇಷ.. ಆಕೆಯೇ ದಿನಕರನ್ನು ಬಯ್ಯದೆ.. ತುಂಟ ಮಗು.. ಅವನ ಗೆಳೆಯರ ಜೊತೆ ಆಟಕ್ಕಾಗಿ ಪಾಪ ಇದನ್ನೇ ಮರೆಯಿತು.. ಎನ್ನುತ್ತಾ ಒಲೆಯೊಳಗೆ ಇದ್ದ ಸೌದೆಗಳನ್ನ ತೆಗೆದಳು.. ಒಲೆ ಉರಿ ಕಡಿಮೆ ಆದ ಮೇಲೆ.. ನೊರೆಗಳ ಪ್ರವಾಹವೂ ಕಡಿಮೆಯಾಗತೊಡಗಿತು.. ಅಷ್ಟರಲ್ಲಿ ದಿನಕರ ಕೈಗೆ ಸಿಗದಷ್ಟು ಮೇಲಕ್ಕೆ ಹೋಗಿದ್ದ.. ಆಕೆಗೆ  ಗೊತ್ತಿತ್ತು.. ಸಂಜೆ ಮನೆಗೆ ಬಂದೆ ಬರುತ್ತಾನೆ.. ಆಗ ವಿಚಾರಿಸಿಕೊಳ್ಳುತ್ತೇನೆ.. ಎನ್ನುತ್ತಾ ನಕ್ಕು ಅಡಿಗೆ ಮನೆಯೊಳಗೇ ತನ್ನ ಕೆಲಸ ಕಾರ್ಯ ಗಮನಿಸಲು ಹೋದಳು..

ಮೊದಲ ಹಂತದಲ್ಲಿ ಸಾಗರವಾಗಿ ಕಂಡು ಬಂದ ಹಾಲಿನ ನೊರೆಯ ಬೆಟ್ಟ ಗುಡ್ಡಗಳನ್ನು ಕಂಡಾಗ ಮನಸ್ಸು ಹಾಯ್ ಎಂದಿತು.. ಸೂರ್ಯ ಆಗಲೇ ಉದಯಿಸಲು ಶುರು ಮಾಡಿದ್ದ .. ಬಾನಲ್ಲಿ ರಂಗು ಮೂಡಿಸಿದ್ದ .. ಆಗ ಮೂಡಿ ಬಂದಿದದ್ದೇ ದಿನಕರನ ಉದಯದ ಕಾಲದ ಘಟನೆ..  ನನ್ನ ತುಂಟ ಮನದಲ್ಲಿ ಆ ದೃಶ್ಯಗಳು ಮೂಡಿತ್ತು.. ಅದು ಮೇಲಿನಂತೆ ಅಕ್ಷರಗಳ ರೂಪ ತಾಳಿತು..













ಅಲ್ಲಿನ ದೃಶ್ಯಗಳನ್ನು ನೋಡುತ್ತಾ ಮೈ ಮನಸ್ಸು ಹಗುರಾಯಿತು.. ಕ್ಯಾಮೆರಾದ ಹೊಟ್ಟೆ ತುಂಬುತ್ತಾ ಹೋಯಿತು.. ಸೂಪರ್ ಸೂಪರ್ ಅನ್ನುವಂತಹ ದೃಶ್ಯಗಳು.. ಕ್ಯಾಮೆರವೋ.. ಕಣ್ಣೋ ಎನ್ನುವ ಹೊಡೆದಾಟದಲ್ಲಿ ಕ್ಯಾಮೆರಾ ಗೆದ್ದಿತ್ತು.. ನಮ್ಮ ತಂಡದ ಎಲ್ಲರೂ ಒಂದೇ ಕಡೆಯಲ್ಲಿ ಸಿಕ್ಕಿದೆವು.. ಬೇಕಾದಷ್ಟು ಮಾತುಗಳು.. ತಂದಿದ್ದ ಕುರುಕುಲು ಹೊಟ್ಟೆಯೊಳಗೆ ಮನೆಮಾಡಿದ್ದೆವು..ಯಾರಿಗೂ ಹೊರಡುವ ಮನಸ್ಸು ಇರಲಿಲ್ಲ .. ಐದು ನಿಮಿಷ ಹತ್ತು ನಿಮಿಷ ಎನ್ನುತ್ತಾ ಕಳೆದದ್ದು ಬರೋಬ್ಬರಿ ಒಂದು ಘಂಟೆಗೂ ಹೆಚ್ಚು.. ಕಡೆಗೆ ಇಡೀ ಬೆಟ್ಟದ ಮೇಲೆ ನಾವಷ್ಟೇ ಮಂದಿ ಎಂದು ಅರಿವಾದ ಹೊತ್ತು.. ಸರಿ ನಡೀರಪ್ಪ ಎನ್ನುತ್ತಾ ಭಾರವಾದ ಮನಸ್ಸಿಂದ ಹೊರಟೆವು.. ಬೆಳಿಗ್ಗೆ ಹಾಲಿನ ನೊರೆಯಿಂದ ತುಂಬಿಕೊಂಡಿದ್ದ ಬೆಟ್ಟ ಗುಡ್ಡಗಳು ದಿನಕರನ ಬೆಳಕಿನ ಪ್ರವಾಹದಲ್ಲಿ ಮೀಯಲು ಪುಟ್ಟ ಮಗು ಬಚ್ಚಲು ಮನೆಗೆ ಹೊರಡಲು ಸಿದ್ಧವಾದಂತೆ ಕಂಡಿತು..

ಇಳಿಯುವಾಗ ಎಚ್ಚರಿಕೆ ಹೆಚ್ಚು ಬೇಕಿತ್ತು.. ಜಾರುಬಂಡಿಗಳು ಸಿಕ್ಕಾಪಟ್ಟೆ ಇದ್ದವು.. ಸುಮಾರು ಎರಡು ಘಂಟೆಗಳ ಪ್ರಯತ್ನ.. ಬೆಟ್ಟದ ತಪ್ಪಲಿಗೆ ಬಂದೆವು.. ಅಲ್ಲಿ ಸ್ವಲ್ಪ ಹೊತ್ತು ವಿರಮಿಸಿಕೊಂಡು.. ಮತ್ತೆ ನಮ್ಮ ವಾಹನವನ್ನು ಹತ್ತಿದಾಗ.. ಎಲ್ಲರಿಗೂ ಒಂದು ತೃಪ್ತಿ.. ಅದೆಷ್ಟೋ ವರ್ಷಗಳ ತಪಸ್ಸಿಗೆ ವರ ಸಿಕ್ಕಿತೇನೋ ಅನ್ನುವ ಖುಷಿ.. ಒಬ್ಬರಿಗೊಬ್ಬರು ಧನ್ಯವಾದ ಹೇಳುತ್ತಾ ಈ ಚಾರಣ ರೂಪಿಸಿದ ನನಗೆ ಕೃತಜ್ಞತೆ ಹೇಳಿದರೂ ನನ್ನ ಮನಸ್ಸು ಮತ್ತು ನನ್ನ ಮಾತು ಹೇಳಿದ್ದು ಒಂದೇ.. "

ಏನೀ ಸ್ನೇಹ ಸಂಬಂಧ
ಎಲ್ಲಿಯದೋ ಈ ಅನುಬಂಧ..
ಮಾಮರವೆಲ್ಲೂ ಕೋಗಿಲೆಯೆಲ್ಲೋ
ಏನೀ ಸ್ನೇಹ ಸಂಬಂಧ.. "

ಒಬ್ಬರಿಗೊಬ್ಬರು ಒಂದೇ ಬಳ್ಳಿಯಲ್ಲಿ ಹುಟ್ಟಲಿಲ್ಲ.. ಆದರೆ ಎಲ್ಲರೂ ಒಂದೇ ಮನೆಯವರ ಹಾಗೆ ಇದ್ದದ್ದು, ಹೊಂದಿಕೊಂಡು ಹೋದದ್ದು ಖುಷಿಯಾಗಿತ್ತು ..  ಹೋಗುವಾಗ ಇದ್ದ ನಿಶ್ಯಬ್ಧ ಬರುವಾಗಲೂ ಇತ್ತು.. ಆದರೆ ಹೋಗುವಾಗ ಇದ್ದ ಮೌನದಲ್ಲಿ ಈ ಚಾರಣ ಹೇಗೋ ಏನೋ ಎನ್ನುವ ಗೊಂದಲವಿದ್ದರೆ.. ಬರುವಾಗ ಅದ್ಭುತ ಚಾರಣದಿಂದ ಮನಸ್ಸು ತುಂಬಿ ಬಂದ ಮನಸ್ಸು ಮೂಕವಾಗಿತ್ತು ಆ ಧನ್ಯಲೋಕದ ದಿವ್ಯ ಮೌನದಲ್ಲಿ.. ಕೈಯನ್ನು ಮೇಲೆ ಎತ್ತಿ ನಮ್ಮನ್ನೆಲ್ಲಾ ಕೂಡಿಸಿದ ಆ ಮಹಾ ಮಹಿಮನಿಗೆ ಒಂದು ನಮಸ್ಕಾರ ಹೇಳಿತು!!!



ಶ್ರೀಚಿರ ಮಂದಾರಗಿ ಜಳಕಿಶಿ ಎನ್ನುವ ಈ ಸುಂದರ ಗುಂಪು ಮತ್ತೆ ಮತ್ತೆ ಒಂದಾಗಿ ಸಾಗುತ್ತೆ ಎನ್ನುವ  ವಿಶ್ವಾಸದಿಂದ ಎಲ್ಲರನ್ನು ಬೀಳ್ಕೊಟ್ಟು ಈ ಚಾರಣದ ಸುಂದರ ಅನುಭವದಲ್ಲಿ ಮಿಂದು ಮುಂದಿನ ಚಾರಣಕ್ಕೆ ಕಾಯುತ್ತ ಕುಂತಿತ್ತು ಮನಸ್ಸು!!!